Advertisement

ಸೇಡಂಗೂ ಕಾಲಿಟ್ಟ ಮಹಾಮಾರಿ ಕೋವಿಡ್

11:53 AM May 28, 2020 | Naveen |

ಸೇಡಂ: ಕಲಬುರಗಿಗೆ ಕೋವಿಡ್  ಆಘಾತ ಉಂಟಾದಾಗಿನಿಂದಲೂ ಗ್ರೀನ್‌ ಝೋನ್‌ ಎನಿಸಿಕೊಂಡಿದ್ದ ತಾಲೂಕಿಗೂ ಕೋವಿಡ್ ಲಗ್ಗೆ ಇಟ್ಟಿದೆ. ತಾಲೂಕಿನ ಮೂರು ಜನರಿಗೆ ಕೋವಿಡ್  ಸೋಂಕು ತಗುಲಿದ್ದು ಜನರ ನಿದ್ದೆಗೆಡಿಸಿದೆ. ಪಟ್ಟಣದ ರೆಹಮತ್‌ ನಗರದ ಏಳು ವರ್ಷದ ಬಾಲಕ ಸೇರಿದಂತೆ ತಾಲೂಕಿನ ಶಂಕರರಾಜಪುರ ಗ್ರಾಮದ 27 ವರ್ಷದ ವ್ಯಕ್ತಿ, 12 ವರ್ಷದ ಬಾಲಕಿಗೆ ಕೋವಿಡ್  ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

Advertisement

ರೆಹಮತ್‌ ನಗರದ ಬಾಲಕನ ಕುಟುಂಬ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಹಿಂದಿರುಗಿತ್ತು ಎನ್ನಲಾಗಿದೆ. ಇನ್ನುಳಿದ ಶಂಕರ ರಾಜಪುರದ ಇಬ್ಬರನ್ನು ಮೇದಕ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಅಲ್ಲದೇ ಇನ್ನು ಏಳು ಜನರ ವರದಿ ಬರಬೇಕಿದೆ. ರೆಹಮತ್‌ ನಗರ ಬಡಾವಣೆಗೆ ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ್‌, ಸಿಪಿಐ ರಾಜಶೇಖರ ಹಳಗೋದಿ, ಪಿಎಸ್‌ಐ ಸುಶೀಲಕುಮಾರ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಭೇಟಿ ನೀಡಿ, ಸೋಂಕಿತರ ಬಾಲಕನನ್ನು ಅಂಬುಲೆನ್ಸ್‌ ಮೂಲಕ ಕಲಬುರಗಿಗೆ ರವಾನಿಸಿದ್ದಾರೆ. ಜೊತೆಗೆ ಬಡಾವಣೆಯನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಿದ್ದು, ಕಂಟೈನಮೆಂಟ್‌ ಝೋನ್‌ ಎಂದು ಪರಿಗಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next