Advertisement

ಅಮಿತ್‌ ಶಾ ಭೇಟಿ ವೇಳೆ ಭದ್ರತಾ ಲೋಪ…ಗೃಹ ಸಚಿವರ ಕಾರನ್ನು ಹಿಂಬಾಲಿಸಿದ ಬಿಳಿ ಬಣ್ಣದ ಕಾರು

09:17 PM Mar 09, 2023 | Team Udayavani |

ಅಗರ್ತಲಾ: ಬಿಜೆಪಿ ಮತ್ತು ತಿಪ್ರಾ ಮೋಥಾ ಮೈತ್ರಿ ಕುರಿತು ತ್ರಿಪುರಾ ರಾಜವಂಶಸ್ಥ ಪ್ರದ್ಯೋತ್‌ ಮಾಣಿಕ್ಯ ದೇಬ್‌ ಬರ್ಮ ಅವರ ಜತೆ ಮಾತುಕತೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ತ್ರಿಪುರ ರಾಜಧಾನಿ ಅಗರ್ತಲಾಗೆ ಆಗಮಿಸಿದ್ದರು. ಈ ವೇಳೆ ಭದ್ರತಾಲೋಪವಾಗಿರುವುದು ಕಂಡುಬಂದಿದೆ.

Advertisement

ಅಗರ್ತಲಾದಲ್ಲಿರುವ ರಾಜ್ಯ ಸರ್ಕಾರದ ಅತಿಥಿಗೃಹದಿಂದ ಅಮಿತ್‌ ಶಾ ಹೊರಟಿದ್ದರು. ಈ ವೇಳೆ ಅವರೊಂದಿಗೆ ಕೇಂದ್ರ ಗೃಹಸಚಿವರ ಬೆಂಗಾವಲು ಪಡೆ ಕೂಡ ಹೊರಟಿದೆ. ಈ ವೇಳೆ ಇತರೆ ವಾಹನಗಳ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದರು.

ಜಂಕ್ಷನ್‌ನಲ್ಲಿ ನಿಂತಿದ್ದ ಟಾಟಾ ಟಿಗೋರ್‌ ಕಾರೊಂದು, ಪೊಲೀಸರ ಸೂಚನೆಯನ್ನು ಧಿಕ್ಕರಿಸಿ, ಅಮಿತ್‌ ಶಾ ಅವರ ಕಾರನ್ನು ಹಿಂಬಾಲಿಸಿದೆ. ಪೊಲೀಸರು ಕಾರನ್ನು ನಿಲ್ಲಿಸಲೂ ಪ್ರಯತ್ನಿಸಿದರೂ ಚಾಲಕ ಮುಂದೆ ಚಲಿಸಿದ್ದಾನೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭದ್ರತಾಲೋಪ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next