Advertisement

ಯಾವುದೇ ಸಮುದಾಯದ ವಿರುದ್ಧ ಇಲ್ಲ: ಕೇಂದ್ರ ಸಚಿವ ಜಾಬ್ಡೇಕರ್‌

08:57 AM Apr 21, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಉದ್ದೇಶಪೂರ್ವಕವಾಗಿ ಸೆಕ್ಯುಲರ್‌, ಕೋಮುವಾದದ ವದಂತಿ ಹಬ್ಬಿಸಲಾಗುತ್ತಿದೆ.

Advertisement

ಕೇಂದ್ರ ಸರಕಾರವು ಸಂಪೂರ್ಣವಾಗಿ ಇಂಥ ಸುಳ್ಳು ಸುದ್ದಿಗಳ ವಿರುದ್ಧವಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಹೇಳಿದ್ದಾರೆ. ತಬ್ಲೀಘಿ ಜಮಾತ್‌ ಸಭೆಯ ಮೂಲಕ ವೈರಸ್‌ ಹಬ್ಬಿದೆ ಎಂಬ ಕಾರಣಕ್ಕೆ, ಯಾವುದೇ ಸಮುದಾಯವನ್ನೂ ಗುರಿಮಾಡಿಲ್ಲ.

ಸರಕಾರವನ್ನು ಟೀಕಿಸುವವರು ಬರೀ ಸುಳ್ಳನ್ನೇ ಹಬ್ಬಿಸುತ್ತಿದ್ದಾರೆ. ಇಂಥವರು ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳನ್ನು ಖಂಡಿಸುತ್ತಿಲ್ಲ.

ಹಲವು ಪ್ರತಿರೋಧಗಳ ನಡುವೆಯೂ ಆರೋಗ್ಯ ಕಾರ್ಯಕರ್ತರು, ಮನೆ ಮನೆಗೆ ತೆರಳಿ ತಪಾಸಣೆ ಮಾಡುತ್ತಿದ್ದಾರೆ. ಸರಕಾರ ಯಾರನ್ನೂ ತಾರತಮ್ಯದಿಂದ ನೋಡುತ್ತಿಲ್ಲ’ ಎಂದಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ ತಬ್ಲೀಘಿ ಜಮಾತ್‌ ಮುಖಂಡ ಮೌಲಾನಾ ಸಾದ್‌ ರಮ್ಜಾನ್‌ ಅವಧಿಯಲ್ಲಿ ಮನೆಯಲ್ಲಿಯೇ ಪ್ರಾರ್ಥನೆ ನಡೆಸುವಂತೆ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next