Advertisement

ಶಿರಸಿಯ ಸುಗಂಧ ಮಂಡಿಸಿದ ಕ್ಯಾನ್ಸರ್‌ ಕುರಿತ ಸಂಶೋಧನಾ ಪ್ರಬಂಧಕ್ಕೆ ದ್ವಿತೀಯ ಸ್ಥಾನ

02:00 PM Jul 17, 2022 | Team Udayavani |

ಶಿರಸಿ: ಮುಂಬೈ ಐಐಟಿಯಿಂದ ಪದವಿ ಪಡೆದ ಶಿರಸಿಯ ಯುವತಿಯೊಬ್ಬಳು ಫರಿದಾಬಾದ್ ನ ತಸ್ಟೀ ಸಂಸ್ಥೆಯಲ್ಲಿ ಕ್ಯಾನ್ಸರ್ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ದ್ಚಿತೀಯ ಸ್ಥಾನ ಪಡೆದು ದೇಶದ ಗಮನ ಸೆಳೆದಿದ್ದಾರೆ.

Advertisement

ನವದೆಹಲಿಯಲ್ಲಿ‌ ನಡೆದ ಸಮಾರಂಭದಲ್ಲಿ ಡಿಬಿಟಿ ಗೌರವ ಕಾರ್ಯದರ್ಶಿ ಡಾ. ರಾಜೇಶ ಗೋಖಲೆ ಹಾಗೂ ಎನ್ ಐಟಿಐ ಸದಸ್ಯ ವಿನೋದ್ ಪೌಲ್ ಎದುರು ಕ್ಯಾನ್ಸರ್‌ ವಿಷಯದ ಕುರಿತು ವಿಶೇಷವಾಗಿ ಪ್ರಬಂಧ ಮಂಡಿಸಿ ಶಿರಸಿ ನಾರಾಯಣ ಗುರು ನಗರದ ಸುಗಂಧ ನಾರಾಯಣ ನಾಯ್ಕ ಈ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಸುಗಂಧ ಅವರು ಶಿರಸಿಯಲ್ಲಿ ವಾಯುವ್ಯ ಸಾರಿಗೆ ನೌಕರರಾಗಿದ್ದ ದಿ.ನಾರಾಯಣ ನಾಯ್ಕ ಹಾಗೂ ನಗರದ ಮೂರನೇ ನಂಬರ್ ಶಾಲಾ ಶಿಕ್ಷಕಿ  ಶಶಿಕಲಾ ನಾಯ್ಕ ಅವರ ಮಗಳು.

Advertisement

Udayavani is now on Telegram. Click here to join our channel and stay updated with the latest news.

Next