Advertisement

ದ್ವಿತೀಯ ಪಿಯು ಪರೀಕ್ಷೆ ದ.ಕ.: 177 ಮಂದಿ ಗೈರು

11:39 PM Mar 25, 2023 | Team Udayavani |

ಮಂಗಳೂರು: ದ್ವಿತೀಯ ಪಿಯುಸಿಯ ರಾಜ್ಯಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರೀಕ್ಷೆಗಳು ಶನಿವಾರ ದ.ಕ. ಜಿಲ್ಲೆಯ ಒಟ್ಟು 52 ಪರೀಕ್ಷಾ ಕೇಂದ್ರಗಳಲ್ಲಿ ನಡೆದವು.

Advertisement

ರಾಜ್ಯಶಾಸ್ತ್ರದಲ್ಲಿ ಹೊಸದಾಗಿ 4,555 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 135 ಮಂದಿ ಗೈರಾಗಿದ್ದರು. ಪುನರಾ ವರ್ತಿತ ವಿಭಾಗದಲ್ಲಿ 55 ವಿದ್ಯಾರ್ಥಿಗಳು ಪರೀಕ್ಷೆ ಬರೆ ದಿದ್ದು, 12 ಮಂದಿ ಗೈರಾಗಿದ್ದರು. ಸಂಖ್ಯಾಶಾಸ್ತ್ರದಲ್ಲಿ ಹೊಸದಾಗಿ 5,118 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 21 ಮಂದಿ ಗೈರಾಗಿದ್ದರು. 32 ಮಂದಿ ಪುನರಾವರ್ತಿತ ವಿದ್ಯಾ ರ್ಥಿಗಳು ಪರೀಕ್ಷೆ ಬರೆದಿದ್ದು, 9 ಮಂದಿ ಗೈರಾಗಿದ್ದರು ಎಂದು ಪ. ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಉಡುಪಿ: 86 ಗೈರು
ಉಡುಪಿ: ಜಿಲ್ಲೆಯಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 86 ವಿದ್ಯಾರ್ಥಿಗಳು ಗೈರಾಗಿದ್ದು, ಯಾವುದೇ ಅಕ್ರಮ, ಡಿಬಾರ್‌ ದಾಖಲಾಗಿಲ್ಲ. ರಾಜ್ಯಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 1,681 ವಿದ್ಯಾರ್ಥಿಗಳಲ್ಲಿ 1,620 ಪರೀಕ್ಷೆ ಬರೆದಿದ್ದಾರೆ. ಸಂಖ್ಯಾಶಾಸ್ತ್ರ ಪರೀಕ್ಷೆಗೆ 2,907 ವಿದ್ಯಾರ್ಥಿಗಳು ನೋಂದಾ ಯಿಸಿಕೊಂಡಿದ್ದು, 2,882 ಮಂದಿ ಹಾಜರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next