Advertisement

ವಾಡಿ: ಮುಳುಗಿದ ಹೆಣ ಹುಡುಕುವಾಗ ಸಿಕ್ಕಿತು ತೇಲಿ ಬಂದ ಹೆಣ!

06:29 PM Aug 10, 2022 | Team Udayavani |

ವಾಡಿ: ನದಿಯಲ್ಲಿ ಮುಳುಗಿದ ಮೀನುಗಾರನ ಹೆಣ ಹುಡುಕುತ್ತಿದ್ದಾಗ ಎಲ್ಲಿಂದಲೋ ತೇಲಿ ಬರುತ್ತಿದ್ದ ಅಪರಿಚಿತ ಪುರುಷನ ಹೆಣವೊಂದು ಪತ್ತೆಯಾದ ಪ್ರಸಂಗ ಚಿತ್ತಾಪುರ ತಾಲೂಕಿನ ಮೂಡಬೂಳ ಗ್ರಾಮ ಸಮೀಪದ ಕಾಗಿಣಾ ನದಿಯಲ್ಲಿ ನಡೆದಿದೆ.

Advertisement

ಮೂಡಬೂಳ ಗ್ರಾಮದ ಹತ್ತಿರದ ಕಾಗಿಣ ನದಿ ದಂಡೆಯಲ್ಲಿ ‌ಮಂಗಳವಾರ ಮಿನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಶೇಖ್ ಅಹ್ಮದ್ ಎಂಬ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬಂದಿಗಳು ಹುಡುಕುತ್ತಿರುವಾಗ ಮುಳುಗಿದ ವ್ಯಕ್ತಿಯ ಬದಲು ನೀರ ಅಲೆಗಳ ಮೇಲೆ ತೇಲಿ ಬರುತ್ತಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ದಂಡೋತಿ ಗ್ರಾಮ ಕಡೆಯಿಂದ ನದಿಯಲ್ಲಿ‌ ಹರಿದು ಬರುತ್ತಿರುವ ಶವವನ್ನು ಸ್ಥಳೀಯರು ಗಮನಿಸಿದ್ದರು. ಆ ಶವವನ್ನೂ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಮುಳುಗಿದ ಮೀನುಗಾರನನ್ನು ಹುಡುಕಲು ಬೋಟ್ ಮೂಲಕ ಭಾಗೋಡಿ ಗ್ರಾಮದ ವರೆಗೆ ಹೋಗಿ ಬಂದರೂ ಅಗ್ನಿಶಾಮಕ ದಳದ ಸಿಬಂದಿಗೆ ಕಾಣೆಯಾದ ಶವ ಪತ್ತೆಯಾಗಲಿಲ್ಲ. ಆದರೂ ಶವ ಪತ್ತೆಗೆ ಶೋಧ ಮುಂದುವರೆದಿದೆ.

ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next