Advertisement
ಯುವಕನನ್ನು ಬಲಿ ಪಡೆದ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಅನುಮತಿ ಯೊಂದಿಗೆ ನಾಗರಹೊಳೆ ಮುಖ್ಯಸ್ಥ ಮಹೇಶ್ ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಹುಣಸೂರು ವಲಯದ ನೇರಳಕುಪ್ಪೆ ಬಿ.ಹಾಡಿ ಬಳಿ ಬೇಸ್ ಕ್ಯಾಂಪ್ ತೆರೆದಿದೆ. ಸೆ.9ರಿಂದಲೇ ಹುಲಿ ಸೆರೆಗೆ ತಾಂತ್ರಿಕ ತಂಡ, ಟ್ರ್ಯಾಕಿಂಗ್ ತಂಡ, ಅರವಳಿಕೆ ಚುಚ್ಚು ಮದ್ದು ನೀಡುವ ತಂಡ, ಆರ್ಆರ್ಟಿ ಹಾಗೂ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಪ್ರಚಾರ ತಂಡ ವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
Related Articles
Advertisement
ಗ್ರಾಮಸ್ಥರು ಸಹಕಾರ ನೀಡಿ: ಹಳ್ಳಿಗಳಲ್ಲಿ ಕಾಡಿಗೆ ಯಾರೂ ಬರಬಾರದು, ಜಾನುವಾರುಗಳನ್ನು ಬಿಡ ಬಾರದೆಂದು ಪ್ರಚಾರ ಮಾಡುತ್ತಿ ದ್ದರೂ ಜನ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ನಮಗೂ, ಇಲಾಖೆ ಸಿಬ್ಬಂದಿಗೂ ನೋವುಂಟಾಗಿದೆ. ಕಾರ್ಯಾಚರಣೆ ನಿಲ್ಲಿಸಿ ಪೆಟ್ರೋಲಿಂಗ್ ಕಡೆಗೆ ಗಮನಹರಿಸುವಂ ತಾಗಿದೆ ಎಂದು ಸತೀಶ್ ತಿಳಿಸಿದರು.
ಕ್ಯಾಮರಾಕಳ್ಳತನಶುಕ್ರವಾರ ರಾತ್ರಿ4 ಟ್ರಾಪಿಂಗ್ ಕ್ಯಾಮರಾ ಕಳ್ಳತನ ಮಾಡಲಾಗಿದೆ. ಅಲ್ಲದೆ ಬೇಟೆಗಾರರು ಜಿಂಕೆಯನ್ನು ಭೇಟೆ ಯಾಡಿದ್ದು, ಗಂಭೀರವಾಗಿ ಪರಿಗಣಿಸಿದ್ದು, ಖಚಿತ ಮಾಹಿತಿ ಮೇರೆಗೆ ಹನ ಗೋಡಿಗೆ ಸಮೀಪದ ಶಿಂಡೇನಹಳ್ಳಿ ಸುಜೇಂದ್ರನ ಮನೆ ಮೇಲೆ ದಾಳಿ ಮಾಡಿ 2 ಕೆ.ಜಿ.ಜಿಂಕೆ ಮಾಂಸ ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಅಲ್ಲದೆಕ್ಯಾಮರಾಕಳುವಿನ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು
ಎಸಿಎಫ್ ಸತೀಶ್ ಹೇಳಿದರು. ಗಾಯಗೊಂಡಿದ್ದ ಹಸು ಸಾವು
ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಕಿಕ್ಕೇರಿಕಟ್ಟೆ ಅರಣ್ಯದಂಚಿನಲ್ಲಿ ಶನಿವಾರ ಹುಲಿ ದಾಳಿಯಿಂದ ಗಾಯಗೊಂಡಿದ್ದ ಹಸು ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದೆ. ತಾಲೂಕಿನ ಹನಗೋಡು ಹೋಬಳಿ ಕಿಕ್ಕೇರಿ ಕಟ್ಟೆಯ ಗಣೇಶ್ ತಮ್ಮ ಜಮೀನಿನಲ್ಲಿ ಜಾನುವಾರು ಗಳನ್ನು ಮೇಯಲು ಬಿಟ್ಟಿದ್ದ ವೇಳೆ ಹಸುವಿನ ಮೇಲೆ ಹಾಡಹಗಲೇ ಹುಲಿ ದಾಳಿ ನಡೆಸಿ ತೀವ್ರವಾಗಿಗಾಯಗೊಳಿಸಿತ್ತು.ಅರಣ್ಯಇಲಾಖೆ ಡಾ.ರಮೇಶ್ ಅವರೇ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಭಾನುವಾರ ಅಸುನೀಗಿದೆ. ಸ್ಥಳಕ್ಕೆ ಹುಣ ಸೂರು ವಲಯದ ಡಿಆರ್ಎಫ್ಒ ಸಿದ್ದರಾಜು, ಸಿಬ್ಬಂದಿ ಭೇಟಿ ನೀಡಿ ಮಹಜರ್ ನಡೆಸಿದರು. ಅದೇ ಹುಲಿ ಅನುಮಾನ?: ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳನ್ನು ಕೊಂದಿದ್ದ ಇತ್ತೀಚೆಗಷ್ಟೇ ಅಯ್ಯನಕೆರೆ ಹಾಡಿಯ ಗಣೇಶ್ ನನ್ನು ಕೊಂದ ಹುಲಿಯೇ ಪಕ್ಕದ ಕಿಕ್ಕೇರಿ ಕಟ್ಟೆ ಯಲ್ಲಿ ಹಸುವಿನ ಮೇಲೆ ದಾಳಿ ನಡೆಸಿರಬಹುದೆಂದು ಸಂಶಯಿಸಲಾಗಿದೆ.