Advertisement

ಮುಂದುವರಿದ ಕಲ್ಕೊರೆತ; ಶಾಸಕ ಸುಕುಮಾರ ಶೆಟ್ಟಿ ಭೇಟಿ

09:17 AM Aug 11, 2019 | keerthan |

ಶಿರೂರು: ಕರಾವಳಿ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದಂತೆ ಕಡಲ್ಕೊರೆತವೂ ಹೆಚ್ಚಾಗಿದೆ. ಪಡುವರಿ ಸಮೀಪದ ದೊಂಬೆ ,ಕಳರ್ಕಟ್ಟೆ ಸಾಯಿವಿಶ್ರಾಮ್ ರೆಸಾರ್ಟ್ ಬಳಿ ಕಡಲ್ಕೊರೆತ ಉಂಟಾಗಿದೆ. ಬೆಳಿಗ್ಗೆಯಿಂದ ದೊಡ್ಡ ತೆರೆಗಳು ಅಪ್ಪಳಿಸುತ್ತಿದೆ. ಕಡಲ ದಂಡೆಯ ಸಮೀಪದ ಮನೆಯವರು ಆತಂಕದಲ್ಲಿದ್ದಾರೆ.

Advertisement

ಸಮುದ್ರದ ದಂಡೆಗೆ ಕಟ್ಟಿದ ಶಿಲೆ ಕಲ್ಲಿನ ಆವರಣ ಸಮುದ್ರ ಪಾಲಾಗಿದೆ. ಈ ಭಾಗದಲ್ಲಿ ಪ್ರತಿವರ್ಷ ಕಡಲ್ಕೊರೆತ ಉಂಟಾಗುತ್ತಿದ್ದು ಸ್ವಲ್ಪ ಭಾಗದಲ್ಲಿ ತಡೆಗೋಡೆ ನಿರ್ಮಿಸಿದರೂ ಸಹ ಅಸಮರ್ಪಕ ಕಾಮಗಾರಿ ಪರಿಣಾಮ ಕಡಲ ಕಿನಾರೆಯವರಿಗೆ ಸಮಸ್ಯೆಯಾಗುತ್ತಿದೆ . ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ

ಶಾಸಕರ ಭೇಟಿ
ತ್ರಾಸಿ, ಸನ್ಯಾಸಿ ಬಲ್ಲೆ, ಕಂಚುಗೋಡು, ಗಂಗೊಳ್ಳಿ ಗ್ರಾಮಗಳ ಕಡಲ್ಕೊರೆತ ಪ್ರದೇಶಕ್ಕೆ ಬೈಂದೂರು ಶಾಸಕರಾದ ಬಿ ಎಂ ಸುಕುಮಾರ ಶೆಟ್ಟಿ ಬಂದರು ಇಲಾಖೆಯ ಅಧಿಕಾರಿಗಳ ಜೊತೆ ಆಗಮಿಸಿ ಪರಿಶೀಲನೆ ನಡೆಸಿದರು. ಜನರ ಆಸ್ತಿ ಪಾಸ್ತಿ, ಮೀನುಗಾರಿಕಾ ಸಂಪರ್ಕ ರಸ್ತೆ ಹಾನಿಗೊಳಗಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಅಂದಾಜು ಪಟ್ಟಿ ತಯಾರಿಸಿ ಕೂಡಲೇ ಕೆಲಸ ಪ್ರಾರಂಭಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next