Advertisement

ಸ್ಕಾರ್ಪಿಯೋ ಡಿಕ್ಕಿ: ಐವರ ದುರ್ಮರಣ

11:21 PM Aug 27, 2019 | Lakshmi GovindaRaj |

ಕಲಬುರಗಿ: ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದು ಮಹಾರಾಷ್ಟ್ರ ಮೂಲದ ಇಬ್ಬರು ಮಕ್ಕಳು ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ಕಲಬುರಗಿ-ಆಳಂದ ನಡುವಿನ ಹೆದ್ದಾರಿಯ ಸಾವಳಗಿ ಕ್ರಾಸ್‌ ಬಳಿ ಸೋಮವಾರ ರಾತ್ರಿ ನಡೆದಿದೆ.

Advertisement

ಮೃತರೆಲ್ಲರೂ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಚಿಂಚಪೂರ ಗ್ರಾಮದ ನಿವಾಸಿಗಳಾಗಿದ್ದು, ಸಂಜಯಕುಮಾರ ಚಡಚಣ (29), ರಾಣಿ ಎಸ್‌. ಚಡಚಣ (26) ದಂಪತಿ ಮತ್ತು ಇವರ ಮಗ ಶ್ರೇಯಸ್‌ ಎಸ್‌.ಚಡಚಣ (3), ಭಾಗ್ಯಶ್ರೀ ಭೀಮಾಶಂಕರ ಅಳಗಿ (22), ಧೀರಜ್‌ ಸಂಗಣ್ಣ (2) ಎಂದು ಗುರುತಿಸಲಾಗಿದೆ.

ಕಾರು ಚಾಲಕ ಭೀಮಾಶಂಕರ ಅಳಗಿ ಹಾಗೂ ಕಾರಿನಲ್ಲಿದ್ದ ಶಿವರಾಜ ಎಸ್‌.ಚಡಚಣ, ಶಿವಮ್ಮ ಆಲಿಯಾಸ್‌ ಶೀತಲ ಸಂಗಣ್ಣ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ತಮ್ಮ ಗ್ರಾಮದಿಂದ ತಿರುಪತಿ ಮತ್ತು ಶ್ರೀಶೈಲಕ್ಕೆ ಪ್ರವಾಸಕ್ಕೆ ಹೋಗಿದ್ದರು. ಸೋಮವಾರ ರಾತ್ರಿ ವಾಪಸ್‌ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next