Advertisement

ಅರಂಬೂರಿನಲ್ಲಿ ಸ್ಕೂಟಿ, ಜೀಪು ಢಿಕ್ಕಿ : ನಿವೃತ್ತ ಎಎಸ್‌ಐ ಮೃತ್ಯು

09:47 AM Aug 14, 2019 | keerthan |

ಸುಳ್ಯ: ಮಾಣಿ ಮೈಸೂರು ರಾ.ಹೆದ್ದಾರಿಯ ಸುಳ್ಯ ನಗರದ ಹೊರವಲಯದ ಅರಂಬೂರಿನಲ್ಲಿ ಸ್ಕೂಟಿ ಹಾಗೂ ಜೀಪು ಪರಸ್ಪರ ಢಿಕ್ಕಿ ಹೊಡೆದು ಸ್ಕೂಟಿ ಸವಾರ ನಿವೃತ್ತ ಎಎಸ್‌ಐ ಪಡ್ಪು ಇಡ್ಯಡ್ಕ ಅಣ್ಣಯ್ಯ ಗೌಡ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ.

Advertisement

ಅಣ್ಣಯ್ಯ ಗೌಡರು ತನ್ನ ಮನೆಯಿಂದ ಅರಂತೋಡು ಕಡೆ ತೆರಳುತ್ತಿದ್ದರು. ಅರಂತೋಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಚಿಕನ್ ಸೆಂಟರೊಂದಕ್ಕೆ‌ಸೇರಿದ ಜೀಪು, ಸ್ಕೂಟಿಗೆ ಢಿಕ್ಕಿ ಹೊಡೆಯಿತು.

ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡ ಅಣ್ಣಯ್ಯ ಗೌಡರನ್ನು ಸುಳ್ಯ ಆಸ್ಪತ್ರೆಗೆ ಕರೆತಂದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next