Advertisement

Pandavarakallu: ಸ್ಕೂಟರ್‌ ಸ್ಕಿಡ್‌, ಸಹ ಸವಾರ ಸಾವು

08:55 PM Aug 13, 2024 | Team Udayavani |

ಪುಂಜಾಲಕಟ್ಟೆ: ವಾಹನವೊಂದಕ್ಕೆ ಸೈಡ್‌ ಕೊಡುವ ಭರದಲ್ಲಿ ಸ್ಕೂಟರ್‌ ಸ್ಕಿಡ್‌ ಆಗಿ ಮಗುಚಿ ಬಿದ್ದು ಸಹಸವಾರ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾ.ನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲಿಗೆ ಸಮೀಪದ ನೀರಾರಿ ಎಂಬಲ್ಲಿ ಸೋಮವಾರ (ಆ.12) ಸಂಭವಿಸಿದೆ.

Advertisement

ತೆಂಕಕಜೆಕಾರು ಗ್ರಾಮದ ಪರಾರಿಬೆಟ್ಟು ನಿವಾಸಿ, ಕೃಷಿಕ ಕೃಷ್ಣಪ್ಪ ಪೂಜಾರಿ(69)ಅವರು ಮೃತಪಟ್ಟವರು.

ಆ. 11ರಂದು ಘಟನೆ ರಾತ್ರಿ ನಡೆದಿದ್ದು, ಆಕ್ಟೀವಾ ಸವಾರ ಮಡಂತ್ಯಾರಿನಿಂದ ಕಕ್ಕೆಪದವಿಗೆ ಸಾಗುತ್ತಿರುವಾಗ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ನೀರಾರಿ ಎಂಬಲ್ಲಿ ವಾಹನವೊಂದಕ್ಕೆ ಸೈಡ್‌ ಕೊಡುವ ಭರದಲ್ಲಿ ಸ್ಕೂಟರ್‌ ಸ್ಕಿಡ್‌ ಆಗಿ ರಸ್ತೆಗೆ ಮಗುಚಿ ಬಿತ್ತೆನ್ನಲಾಗಿದೆ. ತತ್‌ಕ್ಷಣ ಗಾಯಾಳುವಿಗೆ ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಅವರು ಆ.12ರಂದು ಮೃತಪಟ್ಟಿದ್ದಾರೆ. ‌

ಈ ಬಗ್ಗೆ ತಾರನಾಥ ಪಿ.ಎಂಬವರ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next