Advertisement

Accident: ಸ್ಕೂಟರ್‌-ಕಾರು ಢಿಕ್ಕಿ: ಗಾಯಗೊಂಡ ಸವಾರರು

12:27 AM Sep 07, 2023 | Team Udayavani |

ಮಣಿಪಾಲ: ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಸವಾರರು ಗಾಯಗೊಂಡ ಘಟನೆ ನಡೆದಿದೆ.

Advertisement

ಹೆರ್ಗದ ನಿವಾಸಿ ಲಲಿತಾ ನಾಯಕ್‌ ತನ್ನ ತಂಗಿ ಸಂಗೀತಾ ನಾಯಕ್‌ ಹಾಗೂ ಅವರ 4 ವರ್ಷದ ಮಗಳು ಅನ್ವಿ ಎ. ನಾಯಕ್‌ ಅವರನ್ನು ತನ್ನ ಸ್ಕೂಟರ್‌ನಲ್ಲಿ ಸಹ ಸವಾರರನ್ನಾಗಿ ಕೂರಿಸಿಕೊಂಡು ಹಿರಿಯಡ್ಕ- ಪರ್ಕಳ ಮಾರ್ಗವಾಗಿ ಬರುತ್ತಿರುವಾಗ ಕೆಳಪರ್ಕಳದ ಕೆನರಾ ಬ್ಯಾಂಕ್‌ ಎದುರು ತಲುಪುತ್ತಿದ್ದಂತೆ ಮಣಿಪಾಲ- ಹಿರಿಯಡ್ಕ ಮಾರ್ಗವಾಗಿ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ಅತೀವೇಗದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ಗೆ ಢಿಕ್ಕಿ ಹೊಡೆಸಿದ್ದ.

ಪರಿಣಾಮ ಸ್ಕೂಟರ್‌ನಲ್ಲಿದ್ದವರೆಲ್ಲ ಗಾಯಗೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next