Advertisement

UPSC: 4 ಬಾರಿ ಯುಪಿಎಸ್‌ಸಿ ಪಾಸಾದರೂ ದಿವ್ಯಾಂಗ ವ್ಯಕ್ತಿ ಐಎಎಸ್‌ ಆಗಲಿಲ್ಲ!

09:33 AM Jul 25, 2024 | Team Udayavani |

ಹೊಸದಿಲ್ಲಿ: ಟ್ರೈನಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಮೀಸಲು ದುರುಪಯೋಗಪಡಿಸಿಕೊಂಡ ಮಾಹಿತಿ ಬಹಿರಂಗವಾದ ಬೆನ್ನಲ್ಲೇ, ದಿವ್ಯಾಂಗ ವ್ಯಕ್ತಿ 4 ಬಾರಿ ಯುಪಿಎಸ್‌ಸಿ ಪಾಸು ಮಾಡಿದರೂ ಅವರಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಇಸ್ರೋದಲ್ಲಿ ವಿಜ್ಞಾನಿಯಾಗಿರುವ, ಐಐಟಿ ರೂರ್ಕಿ ಪದವೀಧರ ಕಾರ್ತಿಕ್‌ ಕಂಸಲ್‌ 2019ರಲ್ಲಿ 813, 2021ರಲ್ಲಿ 271, 2022ರಲ್ಲಿ 784 ಮತ್ತು 2023ರಲ್ಲಿ 829ನೇ ರ್‍ಯಾಂಕ್‌ ಗಳಿಸಿದ್ದರೂ, ಅವರಿಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ.

ಸ್ನಾಯು ಕ್ಷೀಣಿಸುವಿಕೆಯಿಂದ ಅವರು ಸದಾ ವ್ಹೀಲ್‌ ಚೇರ್‌ನಲ್ಲಿರುತ್ತಾರೆ. ಐಎಎಸ್‌ ಅಧಿಕಾರಿಯಾಗಲು ಅವಕಾಶ ನೀಡುವ ದಿವ್ಯಾಂಗರ ಪಟ್ಟಿಯಲ್ಲಿ ಈತನನ್ನು ಗುರುತಿಸಲಾಗಿಲ್ಲ. ಐಎಎಸ್‌ ಬದಲಿಗೆ, ಭಾರತೀಯ ಕಂದಾಯ ಸೇವೆಯಲ್ಲಿ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: Paris Olympics: ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯಲಿರುವ ಪ್ಯಾರಿಸ್‌ನಲ್ಲಿ ಗ್ಯಾಂಗ್‌ರೇಪ್‌

Advertisement

Udayavani is now on Telegram. Click here to join our channel and stay updated with the latest news.

Next