Advertisement

ಭೀಕರ ಅಪಘಾತ: ಸರ್ಕಾರಿ ಬಸ್ ಗೆ ಶಾಲಾ ಪ್ರವಾಸದ ಬಸ್ ಢಿಕ್ಕಿ; 9 ಮಂದಿ ಸಾವು!

10:10 AM Oct 06, 2022 | Team Udayavani |

ಪಾಲಕ್ಕಾಡ್: ಶಾಲಾ ಪ್ರವಾಸದ ಟ್ಯೂರಿಸ್ಟ್ ಬಸ್ಸೊಂದು ಕೇರಳ ರಾಜ್ಯ ಕೆಎಸ್ ಆರ್ ಟಿಸಿ ಬಸ್ ಗೆ ಢಿಕ್ಕಿ ಹೊಡೆದು ಪರಿಣಾಮ 9 ಮಂದಿ ಮೃತಪಟ್ಟ ಘಟನೆ ತ್ರಿಶೂರು ರಾಷ್ಟ್ರೀಯ ಹೆದ್ದಾರಿಯ ವಡಕಾಂಚೇರಿಯಲ್ಲಿ ನಡೆದಿದೆ.

Advertisement

ಬುಧವಾರ ಮಧ್ಯರಾತ್ರಿಯ ನಂತರ ಭೀಕರ ಅಪಘಾತ ಸಂಭವಿಸಿದ್ದು, ಒಂಬತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಶಾಲಾ ವಿದ್ಯಾರ್ಥಿಗಳೂ ಸೇರಿದ್ದಾರೆ ಎಂದು ವರದಿಯಾಗಿದೆ. ಎರಡೂ ಬಸ್ಸುಗಳಲ್ಲಿನ 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಐದು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ:48 ಕೋಟಿ ರೂ.ಗೆ ಅಪಾರ್ಟ್‌ಮೆಂಟ್‌ ಖರೀದಿಸಿದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌

ಎರ್ನಾಕುಲಂ ಮುಳುಂಪುರತ್ ವೆಟ್ಟಿಕಲ್ ಮಾರ್ ಬಸೇಲಿಯಾಸ್ ಶಾಲೆಯ ವಿದ್ಯಾರ್ಥಿಗಳು ಊಟಿ ಪ್ರವಾಸಕ್ಕೆ ಹೊರಟಿದ್ದರು. ಅವರಿದ್ದ ಬಸ್ ವಡಕಾಂಚೇರಿಯಲ್ಲಿ ಮುಂದೆ ಸಾಗುತ್ತಿದ್ದ ರಾಜ್ಯ ಕೆಎಸ್ಆರ್ ಟಿಸಿ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ.

ಟ್ಯೂರಿಸ್ಟ್ ಬಸ್ಸಿನ ಅತಿ ವೇಗವೇ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಮೃತಪಟ್ಟವರಲ್ಲಿ ಇಬ್ಬರು ಕೆಎಸ್ಆರ್ ಟಿಸಿ ಬಸ್ಸಿನ ಪ್ರಯಾಣಿಕರು ಎಂದು ತಿಳಿದು ಬಂದಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next