Advertisement

ಪುಟಾಣಿಗಳ ಕಲರವ: ಬೇಸಗೆ ರಜೆ ಮುಗಿಸಿ ಪುಟಾಣಿಗಳು ಶಾಲೆಗಳತ್ತ

11:57 PM May 31, 2023 | Team Udayavani |

ಮಂಗಳೂರು/ಉಡುಪಿ: ಬೇಸಗೆ ರಜೆ ಮುಗಿಸಿ ಪುಟಾಣಿಗಳು ಬುಧವಾರ ಶಾಲೆಗೆ ಆಗಮಿಸಿದ್ದು, ಸಂಭ್ರಮ-ಸಡಗರದ ಶಾಲಾ ಪ್ರಾರಂಭೋತ್ಸವದ ಮೂಲಕ ಅವರನ್ನು ಬರಮಾಡಿಕೊಳ್ಳಲಾಯಿತು.

Advertisement

ಶಾಲಾ ಆವರಣ ತಳಿರು ತೋರಣಗಳಿಂದ ಅಲಂಕೃತವಾಗಿದ್ದರೆ, ಮಕ್ಕಳಿಗೆ ಉಡು ಗೊರೆ-ಸಿಹಿ ತಿನಿಸು ನೀಡಿ ಶಾಲೆಗೆ ಸ್ವಾಗತಿಸ ಲಾಯಿತು. ಹೊಸದಾಗಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಲಾಯಿತು.

ಜಿಲ್ಲೆಯ ವಿವಿಧ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿದರು. ದ.ಕ. ಡಿಡಿಪಿಐ ದಯಾನಂದ ನಾಯಕ್‌, ಬಿಇಒ ಸಹಿತ ಅಧಿಕಾರಿಗಳು ವಿವಿಧ ಶಾಲೆಗಳಿಗೆ ತೆರಳಿ ಪರಿಶೀಲಿಸಿದರು.

ದ.ಕ.ದಲ್ಲಿ ಮೊದಲ ದಿನ ಶೇ. 80ಕ್ಕೂ ಅಧಿಕ ಹಾಜರಾತಿಯಿತ್ತು. ಪಠ್ಯ ಪುಸ್ತಕ, ಸಮವಸ್ತ್ರ ಗಳನ್ನು ಬುಧವಾರವೇ ನೀಡಲಾಯಿತು.

ನೀರಿನ ಸಮಸ್ಯೆ ನಿವಾರಣೆ
ಉಡುಪಿ, ಬ್ರಹ್ಮಾವರ ಸಹಿತ ವಿವಿಧ ಶೈಕ್ಷಣಿಕ ವಲಯದ ಕೆಲವು ಶಾಲೆಗಳಿಗೆ ನೀರಿನ ಸಮಸ್ಯೆ ಎದುರಾಗಿದ್ದರಿಂದ ಬಿಇಒ ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿ, ನೀರಿನ ಸಮಸ್ಯೆ ಬಗೆಹರಿಸಿ ಕೊಂಡಿದ್ದಾರೆ. ನೀರು ಸರಬರಾಜು ಆಗುವುದಿಲ್ಲ ಎಂಬ ಕಾರಣಕ್ಕೆ ಯಾವುದೇ ಶಾಲೆಯಲ್ಲೂ ರಜೆ ಘೋಷಣೆ ಮಾಡಿಲ್ಲ.

Advertisement

ಇಂದು ಪಿಯು ತರಗತಿ ಆರಂಭ
ದ.ಕ. ಜಿಲ್ಲೆಯಲ್ಲಿ ಪ್ರಥಮ ಪಿಯು ಹಾಗೂ ದ್ವಿತೀಯ ಪಿಯು ತರಗತಿಗಳು ಜೂ. 1ರಂದು ಆರಂಭವಾಗಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next