Advertisement

ಶಾಲಾ ಮಕ್ಕಳ ಸುರಕ್ಷತೆ ಜಾಗೃತಿ

02:42 PM Jun 25, 2019 | Suhan S |

ತಾವರಗೇರಾ: ಪಟ್ಟಣದಲ್ಲಿ ಸೋಮವಾರ ಶಾಲಾ ಮಕ್ಕಳ ಸುರಕ್ಷತೆ ಕುರಿತು ಸ್ಥಳೀಯ ಪೊಲೀಸ್‌ ಠಾಣೆ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.

Advertisement

ಈ ವೇಳೆ ಮಾತನಾಡಿದ ಪಿಎಸ್‌ಐ ಮಹಾಂತೇಶ ಸಜ್ಜನ್‌, ಟಂಟಂ, ಟಾಟಾ ಏಸ್‌ ಹಾಗೂ ಗೂಡ್ಸ್‌ ವಾಹನಗಳು ಸೇರಿದಂತೆ ಇನ್ನಿತರ ವಾಹನಗಳಲ್ಲಿ ಮಕ್ಕಳನ್ನು ನಿಗದಿಗಿಂದ ಹೆಚ್ಚು ಕರೆದುಕೊಂಡು ಹೋಗುವುದು ಅಪರಾಧ. ಅಂತಹ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕೆರದುಕೊಂಡು ಹೋಗುವುದು ಕಂಡರೆ ವಾಹನ ಮಾಲಿಕರ ಹಾಗೂ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಂತರ ಆಟೋ, ಬೈಕ್‌ ಚಾಲಕರಿಗೆ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಸುಮಾರು 20 ಹೆಚ್ಚಾ ಆಟೋ, ಬೈಕ್‌ಗಳಿಗೆ ದಂಡ ವಿಧಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next