Advertisement

School ಬಸ್ಸಿಗೆ ಕಾರು ಢಿಕ್ಕಿ ; ತಪ್ಪಿದ ಭಾರೀ ಅನಾಹುತ

11:52 PM Jun 28, 2024 | Team Udayavani |

ಕೋಟ: ಬ್ರಹ್ಮಾವರದಿಂದ ಸಾೖಬ್ರಕಟ್ಟೆ ಕಡೆ ಸಂಚರಿಸುತ್ತಿದ್ದ ಶಾಲಾ ಬಸ್ಸಿಗೆ ಬ್ರಹ್ಮಾವರ ಕಡೆ ಚಲಿಸುತ್ತಿದ್ದ ಕಾರು ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಶುಕ್ರವಾರ ಯಡ್ತಾಡಿ ಕೂಡ್ಲಿ ತಿರುವಿನ ಸಮೀಪ ಸಂಭವಿಸಿದೆ.

Advertisement

ಕಾರು ಮಾಸ್ತಿಕಟ್ಟೆಯಿಂದ ಮಣಿಪಾಲಕ್ಕೆ ಬ್ರಹ್ಮಾವರ ಮಾರ್ಗ ವಾಗಿ ಬರುತ್ತಿದ್ದಾಗ ಯಡ್ತಾಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ಸಿಗೆ ಢಿಕ್ಕಿಯಾಗಿ ಮೂರು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ತಪ್ಪಿದ ಅನಾಹುತ
ಶಾಲಾ ವಾಹನದಲ್ಲಿ ವಿದ್ಯಾರ್ಥಿ ಗಳಿದ್ದರೂ ಬಸ್‌ ನಿಧಾನವಾಗಿ ಚಲಿಸುತ್ತಿದ್ದ ಕಾರಣ ಹೆಚ್ಚಿನ ಹಾನಿಯಾಗಿಲ್ಲ, ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ. ಕಾರಿನಲ್ಲಿ ಮೂವರು ಪ್ರಯಾ ಣಿಸುತ್ತಿದ್ದು ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next