Advertisement

ಜು. 22ರಿಂದ ಸುಪ್ರೀಂ ಕೋರ್ಟ್‌ ನಲ್ಲಿ “ರಾಮಸೇತು’ಅರ್ಜಿ ವಿಚಾರಣೆ

08:27 PM Jul 13, 2022 | Team Udayavani |

ನವದೆಹಲಿ: “ರಾಮಸೇತು’ವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕೆಂದು ಆಗ್ರಹಿಸಿ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜು. 22ರಂದು ನಡೆಸುವುದಾಗಿ ಹೇಳಿದೆ.

Advertisement

ಬುಧವಾರದಂದು ನ್ಯಾಯಾಲಯದ ಕಲಾಪದಲ್ಲಿ ತಮ್ಮ ಅರ್ಜಿಯ ವಿಚಾರಣೆ ವೇಳೆ ಖುದ್ದಾಗಿ ಭಾಗಿಯಾಗಿದ್ದ ಸುಬ್ರಹ್ಮಣ್ಯನ್‌ ಸ್ವಾಮಿ, ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು, ಇದನ್ನು ನಿರ್ಲಕ್ಷಿಸಬಾರದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠಕ್ಕೆ ಅರಿಕೆ ಮಾಡಿದರು. ಅದಕ್ಕೆ ನ್ಯಾಯಪೀಠ ಸಮ್ಮತಿ ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next