Advertisement

ಒ.ಆರ್‌.ಒ.ಪಿ: ಮೇಲ್ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

09:36 PM Jul 29, 2022 | Team Udayavani |

ನವದೆಹಲಿ: ಭಾರತೀಯ ಸೇನಾ ಪಡೆಗಳ ನಿವೃತ್ತ ಯೋಧರಿಗಾಗಿ ಜಾರಿಗೊಳಿಸಲಾಗಿರುವ ಒನ್‌ ರ್‍ಯಾಂಕ್‌ ಒನ್‌ ಪೆನ್ಶನ್ (ಒ.ಆರ್‌.ಒ.ಪಿ) ಯೋಜನೆಗೆ ಸಂಬಂಧಪಟ್ಟ ಮೇಲ್ಮನವಿಯೊಂದನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

Advertisement

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ. ಡಿ.ವೈ. ಚಂದ್ರಚೂಡ್‌, ನ್ಯಾ. ಸೂರ್ಯ ಕಾಂತ್‌ ಹಾಗೂ ನ್ಯಾ. ವಿಕ್ರಮ್‌ ನಾಥ್‌ ಅವರುಳ್ಳ ನ್ಯಾಯಪೀಠ, “ಮೇಲ್ಮನವಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗಿದೆ.

ಒನ್‌ ರ್‍ಯಾಂಕ್‌ ಒನ್‌ ಪೆನ್ಶನ್ ಯೋಜನೆಯು ಸಂವಿಧಾನವನ್ನು ದುರ್ಬಲಗೊಳಿಸುವುದಿಲ್ಲ ಹಾಗೂ ಅದು ನಿರಂಕುಶ ಪ್ರಭುತ್ವದ ಪ್ರತಿಫ‌ಲನವೂ ಅಲ್ಲ. ಹಾಗಾಗಿ, ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ” ಎಂದು ನ್ಯಾಯಪೀಠ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next