Advertisement

600 ಸಿಬಂದಿಗೆ ಕಾರ್‌ ಗಿಫ್ಟ್

01:25 PM Apr 14, 2020 | Team Udayavani |

ಸೂರತ್‌: ನಗದಿನ ಸಮಸ್ಯೆ, ಹಣದುಬ್ಬರದ ನಡುವೆಯೂ ಸೂರತ್‌ನ ವಜ್ರದ ವ್ಯಾಪಾರಿ, ಶ್ರೀಹರಿಕೃಷ್ಣ ಎಕ್ಸ್‌ಪೋರ್ಟ್ಸ್ ಮುಖ್ಯಸ್ಥ ಸವ್ಜಿ ಧೋಲಾಕಿಯಾ ಅವರು ತಮ್ಮ ಕಂಪೆನಿಯ ನೌಕರರಿಗೆ ನೀಡುವ ಕೊಡುಗೆಯನ್ನು ಕೈಬಿಟ್ಟಿಲ್ಲ. ಈ ಬಾರಿಯೂ ಅವರು ತಮ್ಮ 600 ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳನ್ನು ನೀಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಸಂಸ್ಥೆಯ ನಾಲ್ವರು ಉದ್ಯೋಗಿಗಳಿಗೆ ದಿಲ್ಲಿಯಲ್ಲಿ ಕಾರುಗಳ ಕೀಗಳನ್ನು ಹಸ್ತಾಂತರಿಸಿದ್ದಾರೆ. ಜೊತೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶ್ರೀಹರಿ ಕೃಷ್ಣ ಎಕ್ಸ್‌ಪೋರ್ಟ್ಸ್ ನೌಕರರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಆಯ್ದ 600 ನೌಕರರಿಗೆ ಕಾರುಗಳನ್ನು ನೀಡಲಾಗಿದೆ. ಉಳಿದವರ ಹೆಸರಿನಲ್ಲಿ ನಿಶ್ಚಿತ ಠೇವಣಿ ಇರಿಸಲಾಗಿದೆ ಎಂದು ಸವ್ಜಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next