Advertisement

ಉಡುಪಿ: ಅನಾಥ ಸ್ಥಿತಿಯಲ್ಲಿದ್ದ ಗಂಡು ಕರುವಿನ ರಕ್ಷಣೆ

02:35 PM Jul 15, 2021 | Team Udayavani |

ಉಡುಪಿ: ಕುಕ್ಕಿಕಟ್ಟೆಯ ಇಂದಿರಾನಗರ ಪರಿಸರದಲ್ಲಿ ಅನಾಥ ಸ್ಥಿತಿಯಲ್ಲಿ ದಿನಗಳ ಕಳೆಯುತ್ತಿದ್ದ ಗಂಡು ಕರುವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ತಾರಾನಾಥ್ ಮೇಸ್ತ ಶಿರೂರು, ಶಾಲಿನಿ ಇಂದಿರಾನಗರ  ಅವರು ರಕ್ಷಿಸಿದರು.

Advertisement

ಕೊಡವೂರು ಪೇಜಾವರ ಮಠದ ಗೋಶಾಲೆಯು ಆಶ್ರಯ ಒದಗಿಸಿತು. ರಕ್ಷಿಸಲ್ಪಟ್ಟಿರುವ ಗಂಡು ಕರುವನ್ನು ಗೋಕಳ್ಳರು ಕದ್ದೊಯ್ಯಲು ಕೆಲವು ದಿನಗಳಿಂದ ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿಯು ಸಮಿತಿಯ ಕಾರ್ಯಕರ್ತರಿಗೆ ತಿಳಿದುಬಂದಿದೆ.

ತಕ್ಷಣ ಗಂಡು ಕರುವನ್ನು ಅವರು ರಕ್ಷಿಸಿದ್ದಾರೆ.  ಉದ್ಯಮಿ ದಿನೇಶ್ ನಾಯಕ್ ಮಾರುಥಿ ವೀಥಿಕಾ ಅವರು, ಸಾಗಟಕ್ಕೆ  ಉಚಿತವಾಗಿ ಟೆಂಪೋ ಒದಗಿಸಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next