Advertisement

ಕಾನೂನು ಪಾಲಿಸಿ ದಂಡ ಉಳಿಸಿ

10:54 PM Sep 11, 2019 | Lakshmi GovindaRaju |

ಚಿತ್ರದುರ್ಗ: ದೇಶದಲ್ಲಿ ಪ್ರತಿ ವರ್ಷ 10 ಸಾವಿರಕ್ಕಿಂತ ಹೆಚ್ಚು ಅಪಘಾತ ಸಂಭವಿಸುತ್ತಿರು ವುದರಿಂದ ಕಾನೂನು ಪಾಲನೆ ಬಿಗಿಗೊಳಿಸಲು ದಂಡದ ಪ್ರಮಾಣ ಹೆಚ್ಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಾರಿಗೆ ನಿಯಮ ಉಲ್ಲಂಘನೆ ದಂಡದ ಮೊತ್ತ ಹೆಚ್ಚಾಗಿದೆ ಎಂಬುದನ್ನು ಒಪ್ಪಬಹುದಾದರೂ ಕಾನೂನು ಗೌರವಿಸಿದರೆ ದಂಡದ ಪ್ರಶ್ನೆಯೇ ಬರುವುದಿಲ್ಲ.

Advertisement

ಗುಜರಾತ್‌ ಸರ್ಕಾರ ದಂಡದ ಪ್ರಮಾಣ ಕಡಿಮೆ ಮಾಡಿದೆ ಎನ್ನುವ ಮಾಹಿತಿ ಇದೆ. ಕರ್ನಾಟಕದಲ್ಲೂ ಇದನ್ನು ಮಾಡಬಹುದಾ ಎನ್ನುವುದನ್ನು ಸಚಿವ ಸಂಪುಟದಲ್ಲಿ ಪುನರ್‌ ಪರಿಶೀಲನೆ ಮಾಡಲಾಗು ವುದು. ರಸ್ತೆ ಅಭಿವೃದ್ಧಿಯಾದರೂ ಹೆಚ್ಚು ಅಪಘಾತ ಗಳು ಸಂಭವಿಸುತ್ತಿವೆ. ಹೆದ್ದಾರಿಗಳು ಚೆನ್ನಾಗಿವೆ ಎಂದು 120 ಕಿ.ಮೀ.ಗಿಂತಲೂ ಹೆಚ್ಚು ವೇಗವಾಗಿ ಹೋಗಿ ಅಪಘಾತ ಮಾಡಿಕೊಳ್ಳುತ್ತಾರೆಂದರು.

Advertisement

Udayavani is now on Telegram. Click here to join our channel and stay updated with the latest news.

Next