Advertisement

“ಅಂಬೇಡ್ಕರ್‌ ಅವರ ಸಮಾನತೆಯ ತಣ್ತೀವನ್ನು ಉಳಿಸಿ ಬೆಳೆಸಿ’

12:57 AM Apr 18, 2019 | Sriram |

ಮಹಾನಗರ: ಅಸ್ಪೃಶ್ಯತೆಯ ಬಲಿಪಶುವಾಗಿದ್ದ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಕೆಳ ವರ್ಗದವರ ಸಾಮಾಜಿಕ ಸಮಾನತೆ ಬಯಸಿದ್ದರು. ದಲಿತರು ಸ್ವಪ್ರಯತ್ನದಿಂದ ಮೇಲ್ಬರಬೇಕು ಎಂದು ಆಶಿಸಿದ್ದರು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಡಾ| ದಯಾನಂದ ನಾಯ್ಕ ಅಭಿಪ್ರಾಯಪಟ್ಟರು.

Advertisement

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳವಾರ ನಡೆದ “ಅಂಬೇಡ್ಕರ್‌ ವಿಚಾರಧಾರೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಅಂಬೇಡ್ಕರ್‌ ಅವರ ಶಿಕ್ಷಣ- ಆಂದೋಲನ ಮತ್ತು ಸಂಘಟನೆ ಎಂಬ ಮೂರು ಅಂಶಗಳು ಜಾರಿಯಾಗಿಲ್ಲ. ಅಂಬೇಡ್ಕರ್‌ ಅವರ ಸಮಾನತೆಯ ತಣ್ತೀವನ್ನು ಉಳಿಸಿ- ಬೆಳೆಸಬೇಕು. ಅರ್ಥಪೂರ್ಣ, ಮುಕ್ತ ಸ್ವಾತಂತ್ರ್ಯ ನಮ್ಮ ದಾಗಬೇಕು ಎಂದರು.

ಪ್ರಾಂಶುಪಾಲ ಡಾ| ಉದಯ ಕುಮಾರ್‌ ಎಂ.ಎ., ಖಾಸಗೀಕರಣದಿಂದ ಸಂವಿಧಾನದತ್ತ ಸ್ವಾತಂತ್ರ್ಯವನ್ನು ಕಳೆದು ಕೊಳ್ಳಬೇಕಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

ಕಾಲೇಜಿನ ಪರಿಶಿಷ್ಟ ಜಾತಿ/ ಪಂಗಡಗಳ ಸೆಲ್‌ ಸಂಚಾಲಕ ಡಾ| ಸಂಜಯ್‌ ಅಣ್ಣಾ ರಾವ್‌ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಶಬೀನಾ ವಂದಿಸಿ, ವಿದ್ಯಾರ್ಥಿನಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.

ವ್ಯಾಖ್ಯಾನ ಅಗತ್ಯ
ಜಾತಿ ಪದ್ಧತಿ ಈಗಲೂ ಇದೆ, ಭಾಷೆ, ಅಹಾರ ಪದ್ಧತಿಯನ್ನೂ ಆವರಿಸಿಕೊಂಡಿದೆ. ಎಂದು ಪ್ರತಿಪಾದಿಸಿದ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಪ್ರೊ| ಪಟ್ಟಾಭಿರಾಮ ಸೋಮಯಾಜಿ, ಧರ್ಮವನ್ನು ಕಾಲಕಾಲಕ್ಕೆ ವ್ಯಾಖ್ಯಾನಿಸಿ ಸುಧಾರಣೆ ತರುವಂತವರಿರಬೇಕು. ನಮ್ಮ ದೇಶದ ಕುರಿತು ಚಿಂತನೆ ನಡೆಸಿದವರ ಬಗ್ಗೆ ಅರಿಯಬೇಕು. ಅಧಿಕಾರವನ್ನು ಪ್ರಶ್ನಿಸುವ ಛಾತಿಯಿರಬೇಕು, ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next