Advertisement

ದೇಶಕ್ಕಾಗಿ ಸಾವರ್ಕರ್‌ ತ್ಯಾಗ ಅಪಾರ

05:25 AM May 29, 2020 | Lakshmi GovindaRaj |

ಮೈಸೂರು: ದೇಶಕ್ಕಾಗಿ ಸಾವರ್ಕರ್‌ ಅವರಷ್ಟೇ ಅಲ್ಲದೇ ಅವರ ಇಡೀ ಕುಟುಂಬದ ತ್ಯಾಗ ದೊಡ್ಡದಿದ್ದು, ಸಾವರ್ಕರ್‌ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದರು.

Advertisement

ವಿನಾಯಕ  ದಾಮೋದರ್‌ ಸಾವರ್ಕರ್‌ ಅವರ 137ನೇ ಜಯಂತಿ ಹಾಗೂ ವೀರ ಸಾವರ್ಕರ್‌ ಯುವ ಬಳಗದ 15ನೇ ವಾರ್ಷಿಕೋತ್ಸವ ಅಂಗವಾಗಿ ನಗರದ ಡಿ.ದೇವರಾಜ ಅರಸು ರಸ್ತೆಯ ತ್ರಿಪುರ ಭೈರವಿ ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾವರ್ಕರ್‌ ಅವರಂಥ ದೇಶಭಕ್ತರ ಹೆಸರಿನಲ್ಲಿ ಜಯಂತಿಯನ್ನು ಸತತ 15 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಬಳಗದ ಕೆಲಸ ಶ್ಲಾಘನೀಯ. ಪ್ರತಿಯೊಬ್ಬ ಯುವಕನ ಮನಸ್ಸಿನಲ್ಲಿ ಆ  ಕಿಚ್ಚು ಇದ್ದಾಗ ದೇಶ ಬಲಿಷ್ಠವಾಗುತ್ತದೆ ಎಂದರು

. ಸಂಸದ ಪ್ರತಾಪ್‌ ಸಿಂಹ, ಶಾಸಕ ಎಲ್‌ .ನಾಗೇಂದ್ರ, ನಗರಪಾಲಿಕೆ ಸದಸ್ಯೆ ಪ್ರಮಿಳಾ ಭರತ್‌, ಬಿಜೆಪಿ ಮುಖಂಡರಾದ ಅಪ್ಪಣ್ಣ, ಸಿದ್ದರಾಜು, ಮೈ.ಕಾ.ಪ್ರೇಮ್‌ಕುಮಾರ್‌, ಬಿ.ಎಂ.ರಘು,  ಬಳಗದ ಅಧ್ಯಕ್ಷ ರಾಕೇಶ್‌ ಭಟ್‌, ಕಾರ್ಯದರ್ಶಿ ದೀಪಕ್‌, ಮುಖಂಡರಾದ ಸಂದೇಶ್‌ ಪವಾರ್‌, ಸಂಜಯ್‌, ವಿಕ್ರಮ್‌ ಐಯ್ಯಂಗಾರ್‌, ಟಿ.ಎಸ್‌.ಅರುಣ್‌, ಅಜಯ್‌ ಶಾಸಿOಉ, ಗುರುರಾಜ್‌ ಶೆಟ್ಟಿ, ಸಚಿನ್‌, ಪ್ರಮೋದ್‌ ಗೌಡ, ಎಸ್‌.ಎನ್‌.ರಾಜೇಶ್‌,  ರವಿ ಕುಂಚಿಟಿಗ, ಉಮಾಶಂಕರ್‌, ಗೈಡ್‌ ಚಂದ್ರು, ಅನೂಜ್‌ ಸಾರಸ್ವತ್‌, ರಾಜೇಂದ್ರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next