Advertisement

ದೇಶಿ ಕ್ರಿಕೆಟ್‌ ಕೂಟ ರದ್ದಾಗದು: ಗಂಗೂಲಿ ಭರವಸೆ

10:53 PM Jan 06, 2022 | Team Udayavani |

ಮುಂಬಯಿ : ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ದೇಶಿ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸುವುದಾಗಿ ಎಲ್ಲ ರಾಜ್ಯ ಕ್ರಿಕೆಟ್‌ ಮಂಡಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಪತ್ರ ಬರೆದಿದ್ದಾರೆ. ಮಂಡಳಿಗಳು ಎಲ್ಲ ರೀತಿಯಲ್ಲೂ ಸಹಕರಿಸಲಿವೆ ಎಂಬ ಭರವಸೆ ಅವರದು.

Advertisement

“ದೇಶಿ ಕ್ರಿಕೆಟ್‌ ಋತುವನ್ನು ಪುನರಾರಂಭಿಸಲು ಮಂಡಳಿ ಯೋಚಿಸಿದೆ. ಆಟಗಾರರು, ಸಿಬಂದಿ ಸೇರಿದಂತೆ ಎಲ್ಲರ ಆರೋಗ್ಯವನ್ನು ಗಮನದಲ್ಲಿರಿಸಿ ಸದ್ಯದ ಮಟ್ಟಿಗೆ ರಣಜಿ ಕೂಟವನ್ನು ಮುಂದೂಡಲಾಗಿದೆಯೇ ಹೊರತು ಕಳೆದ ಬಾರಿಯಂತೆ ಕೂಟವನ್ನು ರದ್ದುಗೊಳಿಸುವ ಉದ್ದೇಶ ಬಿಸಿಸಿಐ ಮುಂದಿಲ್ಲ. ದೇಶದಲ್ಲಿ ಕೋವಿಡ್‌ ಹತೋಟಿಗೆ ಬಂದ ಬಳಿಕ ಕೂಟವನ್ನು ಖಂಡಿತವಾಗಿಯೂ ನಡೆಸುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಸೌರವ್‌ ಗಂಗೂಲಿ ಭರವಸೆ ನೀಡಿದ್ದಾರೆ.

ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ಜತಗೆ ಕರ್ನಲ್‌ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ ಕೂಡ ಇದೇ ತಿಂಗಳಲ್ಲಿ ಆರಂಭವಾಗಬೇಕಿತ್ತು.

ಇದನ್ನೂ ಓದಿ : ಮೋದಿಗಾಗಿ ಬಿಜೆಪಿ ಕಾರ್ಯಕರ್ತರಿಂದ ದೇಶಾದ್ಯಂತ ಯಾಗ : ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next