Advertisement

ವಿಜಯ್ ಹಜಾರೆ ಟ್ರೋಫಿ: ಸೆಮಿಯಲ್ಲಿ ಸೋತ ಕರ್ನಾಟಕ; ಫೈನಲ್ ಪ್ರವೇಶಿಸಿದ  ಸೌರಾಷ್ಟ್ರ

04:38 PM Nov 30, 2022 | Team Udayavani |

ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ ಕೂಟದ ಸೆಮಿ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಕರ್ನಾಟಕವು ತನ್ನ ಅಭಿಯಾನ ಅಂತ್ಯಗೊಳಿಸಿದೆ. ಐದು ವಿಕೆಟ್ ಗಳ ಜಯ ಸಾಧಿಸಿದ ಸೌರಾಷ್ಟ್ರ ತಂಡವು ಫೈನಲ್ ಪ್ರವೇಶಿಸಿದೆ.

Advertisement

ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕವು 49.1 ಓವರ್ ಗಳಲ್ಲಿ 171 ರನ್ ಗಳಿಸಿದರೆ, ಸೌರಾಷ್ಟ್ರವು ಐದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕರ್ನಾಟಕಕ್ಕೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 47 ರನ್ ಗೆ ತಂಡದ ನಾಲ್ಕು ಹುದ್ದರಿ ಕಳೆದುಕೊಂಡಿತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ನಿಂತು ಆಡಿದ ಸಮರ್ಥ್.ಆರ್ 88 ರನ್ ಗಳಿಸಿದರು. ಮನೋಜ್ ಭಂಡಗೆ 22 ರನ್ ಗಳಿಸಿದರು.

ಇದನ್ನೂ ಓದಿ:ಡೇಟಿಂಗ್‌ ನಲ್ಲಿ ಮಲೈಕಾ – ಅರ್ಜುನ್‌: ಮೊದಲ ಮಗುವಿನ ನಿರೀಕ್ಷೆಯಲ್ಲಿ? ಬಿಟೌನ್‌ ನಲ್ಲಿ ಹಾಟ್‌ ಟಾಪಿಕ್

ಸೌರಾಷ್ಟ್ರ ಪರ ನಾಯಕ ಉನಾದ್ಕತ್ ನಾಲ್ಕು ವಿಕೆಟ್ ಪಡೆದರು, ಪ್ರೇರಕ್ ಮಂಕಡ್ ಎರಡು ವಿಕೆಟ್ ಕಿತ್ತರು.

Advertisement

ಗುರಿ ಬೆನತ್ತಿದ ಸೌರಾಷ್ಟ್ರ ಶೂನ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಆಡಿದ ಜಯ್ ಗೊಹಿಲ್ 61 ರನ್, ಸಮರ್ಥ್ ವ್ಯಾಸ್ 33 ರನ್, ಪ್ರೇರಕ್ ಮಂಕಡ್ 35 ರನ್, ಅರ್ಪಿತ್ ವಸವಡ 25 ರನ್ ಗಳಿಸಿದರು. 36.2 ಓವರ್ ಗಳಲ್ಲಿ ಗುರಿ ಬೆನ್ನತ್ತಿದ ಸೌರಾಷ್ಟ್ರ ಐದು ವಿಕೆಟ್ ಗಳ ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next