Advertisement

ಸೌದಿಯಲ್ಲಿ ಕಾರು ಅಪಘಾತ ದ.ಕ. ಜಿಲ್ಲೆಯ ಮೂವರ ಸಾವು: ಸೌದಿಯಲ್ಲೇ ಅಂತ್ಯಕ್ರಿಯೆ ನಡೆಸಲು ತಯಾರಿ

08:54 PM Feb 05, 2023 | Team Udayavani |

ಸುರತ್ಕಲ್‌: ಸೌದಿ ಅರೇಬಿಯಾದ ಅಲ್‌-ಹಸಾ ಎನ್ನುವ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಮೃತಪಟ್ಟ ಒಟ್ಟು ನಾಲ್ವರು ಅನಿವಾಸಿ ಉದ್ಯೋಗಿಗಳ ಅಂತ್ಯಕ್ರಿಯೆ ಸೌದಿಯಲ್ಲಿ ನಡೆಸಲು ಸಕಲ ತಯಾರಿ ನಡೆಸಲಾಗುತ್ತಿದೆ.

Advertisement

ಹಳೆಯಂಗಡಿ ಬಳಿಯ ಕದಿಕೆ ನಿವಾಸಿ ರಿಝ್ವಾನ್(23) ಸುರತ್ಕಲ್‌ ಕೃಷ್ಣಾಪುರದ ಶಿಹಾಬ್‌(25) ಮಂಗಳೂರು ಬೆಂಗರೆ ನಿವಾಸಿ ಅಕೀಲ್‌(23) ಹಾಗು ಬಾಂಗ್ಲಾದೇಶದ ಇನ್ನೋರ್ವ ಪ್ರಜೆ ನಾಸೀರ್‌ ಎಂಬ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ದೇಹ ಅಪಘಾತದಿಂದ ಜರ್ಝರಿತವಾದ ಕಾರಣ ಅವರು ಕೆಲಸ ಮಾಡುತ್ತಿದ್ದ ಸ್ಯಾಕೋ ಕಂಪನಿ ಅಲ್ಲಿಯೇ ವ್ಯವಸ್ಥೆ ,ಮಾಡುತ್ತಿದೆ. ಪೋಷಕರು ಇದಕ್ಕೆ ಬೇಕಾದ ಸ್ಟಾಂಪ್‌ ಪೇಪರ್‌ ಸಹಿತ ಬೇಕಾದ ದಾಖಲೆ ಪತ್ರ ಕಳಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಸೌದಿ ಅರೇಬಿಯಾದ ರಿಯಾದ್‌ ಪ್ರಾಂತ್ಯದ ಅಲ್‌-ಹಸಾ ಎಂಬ ಪ್ರದೇಶದ ಖುರೈಸ್‌ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿತ್ತು.

ಇದನ್ನೂ ಓದಿ: ವಜ್ರದ ನೆಕ್ಲೇಸ್ ಕದ್ದ ಕಳ್ಳ ‘ಇಲಿ’! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಇಲಿಯ ಕೈಚಳಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next