Advertisement

ಭಾರತದಲ್ಲಿ ಹೂಡಿಕೆ ಮುಂದುವರಿಕೆ: ಸೌದಿ ಭರವಸೆ

01:59 AM May 05, 2020 | Hari Prasad |

ಹೊಸದಿಲ್ಲಿ: ಸೌದಿ ಅರೇಬಿಯ ಸರ್ಕಾರಿ ಒಡೆತನದ ಸರ್ಕಾರಿ ಪೆಟ್ರೋಲ್‌ ಕಂಪನಿಯ ನಿವ್ವಳ ಲಾಭ 2019ರಲ್ಲಿ ಶೇ.20.6ರಷ್ಟು ಕುಸಿದಿದೆ. ಆದರೂ ಅದು ಭಾರತದಲ್ಲಿ ಹೂಡಿಕೆ ಮಾಡುವ ತನ್ನ ಆಸಕ್ತಿಯನ್ನು ಕಳೆದುಕೊಂಡಿಲ್ಲ.

Advertisement

ಇದರ ನಡುವೆ ಭಾರತದಲ್ಲಿ ಕೋವಿಡ್ 19 ವೈರಸ್‌ ಹರಡಿದೆ. ಇಷ್ಟಾದರೂ ಸೌದಿಯ ಭಾರತದ ರಾಯಭಾರಿ ಸೌದ್‌ ಬಿನ್‌ ಮೊಹ ಮ್ಮದ್‌ ಅಲ್‌ ಸತಿ, ಭಾರತದಲ್ಲಿ ನಮ್ಮ ಹೂಡಿಕೆ ಮುಂದುವರಿಯಲಿದೆ ಎಂದಿದ್ದಾರೆ.

ಭಾರತ ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ, ಬೃಹತ್‌ ಆರ್ಥಿಕ ವ್ಯವಸ್ಥೆ ಹೊಂದಿದ್ದೇವೆ. ಇಲ್ಲಿಂದ ಕಾಲ್ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಖಚಿತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next