Advertisement
ಐದು ವರ್ಷಗಳ ಹಿಂದೆ ಸತ್ಯಭಾಮಾ ಮೂರು ಎಕರೆ ಕಾಲಿ ಗುಡ್ಡದಲ್ಲಿ ಗೇರು ಕೃಷಿ ಮಾಡಲು ಯೋಚಿಸಿದಾಗ ಪುತ್ತೂರಿನ ಗೇರು ಅಭಿವೃದ್ಧಿ ಮಂಡಳಿ ಮಾಹಿತಿ ಒದಗಿಸಿತು. ಕೃಷಿ ವಿಜಾnನಿ ಗಂಗಾಧರ ನಾಯಕ್ ಸ್ವತಃ ಸ್ಥಳಕ್ಕೆ ಬಂದು ಕೃಷಿಯ ಮಾರ್ಗದರ್ಶನ ಮಾಡಿದರು. ಐವತ್ತು ಸಾವಿರ ರೂ.ಗಳ ಸಹಾಯಧನವನ್ನೂ ಒದಗಿಸಿದರು. ಉಳ್ಳಾಲ, ಉಳ್ಳಾಲ-2, ಉಳ್ಳಾಲ-4, ಭಾಸ್ಕರ, ವೆಂಗೊರ್ಲ, ಆರ್ಐ ತಳಿಗಳ ಎಂಟು ನೂರು ಗಿಡಗಳ ನಾಟಿಯೂ ನಡೆಯಿತು.
Related Articles
Advertisement
ಇನ್ನು ಗೇರು ತೋಟದಲ್ಲಿ ಕಾಡುಕಂಟಿಗಳಿಲ್ಲ. ಉದುರಿದ ಹಣ್ಣುಗಳನ್ನು ಆಯ್ದುಕೊಳ್ಳಲು ಸುಲಭವಾಗಿದೆ. ಸತ್ಯಭಾಮಾ ಅವರು ಗೇರು ಹಣ್ಣುಗಳಿಂದ ತಯಾರಿಸಿದ ಹಲ್ವ ಮತ್ತು ಷರಬತ್ತು ಯಾವುದರಿಂದ ತಯಾರಿಸಿದ್ದು ಎಂದು ತಿಳಿಯದಷ್ಟು ರುಚಿಕರವಾಗಿದ್ದವು. ಗೇರು ಮಂಡಳಿಯ ಸಭೆಗಳಲ್ಲಿ ಅವರ ಈ ತಯಾರಿಕೆಗಳನ್ನು ಅತಿಥಿಗಳಿಗೂ ಹಂಚಿದ್ದಾರೆ. ಗೇರು ಹಣ್ಣುಗಳಿಗೂ ಉತ್ತಮ ಗಿರಾಕಿ ಇದೆ. ಕಳೆದ ವರ್ಷ ಕಚ್ಚಾ ಬೀಜಕ್ಕೆ ಕಿಲೋಗೆ 117 ರೂ. ಗಳ ಗರಿಷ್ಠ ದರ ಸಿಕ್ಕಿದೆ. ಈ ವರ್ಷ 30 ಕ್ವಿಂಟಾಲು ಬೆಳೆ ಕೈಗೆ ಬರುವ ನಿರೀಕ್ಷೆ ಇದೆ. ಸತ್ಯಭಾಮಾ ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ. ಒಬ್ಬನೇ ಮಗ ಬೆಂಗಳೂರಿನಲ್ಲಿ ಎಂಜಿನಿಯರ್. ಆದರೂ ಕೃಷಿಯಿಂದಲೇ ಮಕ್ಕಳ ಶ್ರೇಯಸ್ಸನ್ನು ಸಾಧಿಸಿರುವ ಅವರು ಹತ್ತು ಮಿಶ್ರ ತಳಿಯ ದನಗಳನ್ನು ಸಾಕಿ ದಿನಕ್ಕೆ ಎಂಭತ್ತು ಲೀಟರ್ ಹಾಲು ಮಾರಾಟ ಮಾಡುತ್ತಿದ್ದಾರೆ. ಮಂಚಿ ಹಾಲು ಸಂಘಕ್ಕೆ ಹಾಲು ಪೂರೈಸುವವರಲ್ಲಿ ದ್ವಿತೀಯ ಸ್ಥಾನ ಗಳಿಸಿ ಸನ್ಮಾನವನ್ನು ಪಡೆದಿದ್ದಾರೆ. ಗೇರು ಮಂಡಳಿ ಕೂಡ ಅವರ ಸಾಧನೆಗೆ ಗೌರವ ಸಲ್ಲಿಸಿದೆ. ಕಸಿ ತಳಿಯ ಇನ್ನೊಂದು ವೈಶಿಷ್ಟ್ಯವೆಂದರೆ ಬಹು ಬೇಗನೆ ವರ್ಷದ ಫಸಲು ಸಿಗುತ್ತದೆಯಂತೆ. ಮಾಹಿತಿಗೆ 8971284717. ರಾತ್ರಿ 7ರಿಂದ 8.
– ಪ. ರಾಮಕೃಷ್ಣ ಶಾಸ್ತ್ರೀ