Advertisement

‘ಕಾಂಗ್ರೇಸ್ ನಿಂದ ದ್ರೋಹ’ಕುಮಾರಸ್ವಾಮಿ ಹೇಳಿಕೆ ಮುಗಿದ ಅಧ್ಯಾಯ: ಸತೀಶ್ ಜಾರಕಿಹೊಳಿ ಟಾಂಗ್

03:01 PM Dec 05, 2020 | sudhir |

ಬೆಳಗಾವಿ: ಕಾಂಗ್ರೆಸ್ ನಿಂದ ದ್ರೋಹ ಆಗಿದೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿರುವ ಕಾಂಗ್ರೆಸ್ ಬಗೆಗಿನ ಹೇಳಿಕೆ ಮುಗಿದ ಅಧ್ಯಾಯ. ಜೆಡಿಎಸ್, ಬಿಜೆಪಿ ಎಂಬ ಪ್ರಶ್ನೆಯಿಲ್ಲ, ಎಲ್ಲವೂ ಮುಗಿದು ಹೋಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಚ್ ಡಿಕೆ ಹೇಳಿಕೆಗೆ ಟಾಂಗ್ ನೀಡಿದರು.

Advertisement

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾತನಾಡಿದ ಅವರು, ಬೇರೆ ಬೇರೆ ಕಾರಣಗಳಿಂದ ಮುಗಿದು ಹೋಗಿದೆ, ಚರ್ಚೆ ಮಾಡಲು ಆಗುವುದಿಲ್ಲ. ಕಾಂಗ್ರೆಸ್ ನಿಂದ ದ್ರೋಹ ಆಗಿದೆ ಎನ್ನುವುದಕ್ಕೆ ಸತ್ಯಶೋಧನೆ ಕಮಿಟಿ ನೇಮಿಸಬೇಕು ಅಂತಾ ಸತೀಶ ಜಾರಕಿಹೊಳಿ‌ ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಪ್ರೀಪ್ಲ್ಯಾನ್ ಮಾಡಿ ನನ್ನ ಹೆಸರು ಹಾಳು ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಕುಮಾರಸ್ವಾಮಿ, ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಷ್ಟು ನಾವಿಲ್ಲ. ಅವರ ಮಟ್ಟದಲ್ಲಿ ಅದಕ್ಕೆ ನಮ್ಮವರು ಮಾತನಾಡುತ್ತಾರೆ ಎಂದರು.

ಇದನ್ನೂ ಓದಿ:ಡ್ರಗ್ಸ್‌ ಪ್ರಕರಣ: ಸಂಜನಾ, ರಾಗಿಣಿ ತಲೆಕೂದಲು ಪರೀಕ್ಷೆಗೆ ಹೈಕೋರ್ಟ್‌ ಅನುಮತಿ

Advertisement

Udayavani is now on Telegram. Click here to join our channel and stay updated with the latest news.

Next