Advertisement
ಶಾಂಭವಿ ಮತ್ತು ನಂದಿನಿ ಸಂಗಮದ ಅಳಿವೆ ಪ್ರದೇಶದಲ್ಲಿ ಈ ನದಿ ಕೊರೆತ ಹೆಚ್ಚಾಗಿದೆ. ಪ್ರವಾಸಿಗರ ವಿಹಾರಕ್ಕಾಗಿರುವ ಮರಗಳು ಭೂಮಿ ಬಲ ಕಳೆದುಕೊಂಡು ನದಿಗೆ ಬೀಳುತ್ತಿದೆ. ಕುಳಿತುಕೊಳ್ಳಲು ಹಾಕಲಾಗಿದ್ದ ಬೆಂಚುಗಳು ಸಹ ನದಿಯ ಪಾಲಾಗಿ ಕಡಲಿಗೆ ಸೇರುತ್ತಿವೆ.
ಈ ಸಮಯದಲ್ಲಿ ಬೀಚ್ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಾಗಿದ್ದು, ಸುಂದರ ವಿಹಾರದ ತಾಣವಾಗಿದ್ದ ಗಾಳಿ ಮರಗಳಿರುವ ಪ್ರದೇಶದಲ್ಲಿ ಬಹಳ ಎಚ್ಚರಿಕೆಯಿಂದ ಪ್ರವಾಸಿಗರು ಸಂಚರಿಸಬೇಕಾದ ಆವಶ್ಯಕತೆ ಇದೆ.
Related Articles
ಕಳೆದ ಎರಡು ವರ್ಷದ ಹಿಂದೆ ಬೀಚ್ನ ಸಮುದ್ರ ಕೊರೆತಕ್ಕೆ ಈ ಭಾಗದಲ್ಲಿ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿರುವುದರಿಂದ ಬೀಚ್ಗೆ ತೆರಳುವ ರಸ್ತೆ ಸಹಿತ ಬೀಚ್ ದ್ವಾರದ ಕಚೇರಿ ಮತ್ತಿತರ ಪಶ್ಚಿಮ ದಿಕ್ಕಿನಲ್ಲಿನ ಜಮೀನಿಗೂ ಯಾವುದೇ ಹಾನಿಯಾಗಿಲ್ಲ.
Advertisement
ಇದೇ ರೀತಿ ಮುಂದುವರಿದ ಕಾಮಗಾರಿಯಾಗಿ ಅಳಿವೆಯಲ್ಲಿಯೂ ಶಾಶ್ವತ ಗೋಡೆಯನ್ನು ನಿರ್ಮಿಸಿದಲ್ಲಿ ಮಾತ್ರ ಬೀಚ್ ಉಳಿಯುವ ಸಾಧ್ಯತೆ ಇದೆ.
ಸರಕಾರದ ಗಮನ ಸೆಳೆಯಲಾಗುವುದುಮಾಜಿ ಸಚಿವ ಕೆ.ಅಭಯಚಂದ್ರ ಅವರು ಈ ಹಿಂದೆ ಅಳಿವೆ ಪ್ರದೇಶದಲ್ಲಿ 2 ಕೋ.ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆಗೆ ನೀಲನಕ್ಷೆಯನ್ನು ತಯಾರಿಸಿ ಸರಕಾರದ ಅನುಮೋದನೆಗೆ ಸಲ್ಲಿಸಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ ಮೂಲಕ ಇದರ ಬಗ್ಗೆ ಗಮನ ಸೆಳೆಯಲು ಪ್ರಯತ್ನ ಮುಂದುವರಿಸಲಗುವುದು.
- ಎಚ್. ವಸಂತ ಬೆರ್ನಾಡ್, ಅಧ್ಯಕ್ಷರು , ಬೀಚ್ ಅಭಿವೃದ್ಧಿ ಸಮಿತಿ, ಸಸಿಹಿತ್ಲು, ಹಳೆಯಂಗಡಿ ಗ್ರಾ.ಪಂ. ಬ್ರೇಕ್ ವಾಟರ್ ಅಗತ್ಯ
ಅಳವೆಯಲ್ಲಿನ ನೀರಿನ ಒತ್ತಡಕ್ಕೆ ಜೆಟ್ಟಿಯ ಬಳಿ ಕನಿಷ್ಠ ಎರಡು ಬ್ರೇಕ್ ವಾಟರ್ ನಿರ್ಮಿಸಿದಲ್ಲಿ ಅಳಿವೆಯ ನ್ನು ಉಳಿಸಬಹುದು. ನಿರ್ಲಕ್ಷ್ಯ ತೋರಿದಲ್ಲಿ ಮುಂದಿನ ವರ್ಷ ಮುಂಡ ಬೀಚ್ ಎಂಬುದೇ ಇರುವುದಿಲ್ಲ. ಸಂಪೂರ್ಣವಾಗಿ ಕಡಲು ಪಾಲಾಗಲಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಕೂಡಲೆ ಸ್ಥಳ ಪರಿಶೀಲನೆ ನಡೆಸಬೇಕು.
- ಚಂದ್ರಕುಮಾರ್ ಸದಸ್ಯರು, ಹಳೆಯಂಗಡಿ ಗ್ರಾ.ಪಂ.