Advertisement

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸೇನಾ ಜವಾನ

07:07 PM Jul 21, 2017 | udayavani editorial |

ರಾಯಪುರ : ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಓರ್ವ ಜವಾನ ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯಲ್ಲಿ  ತನಗೆ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. 

Advertisement

 ಬರೇಬೇಡಾ ಗ್ರಾಮದಲ್ಲಿನ ಸೀಮಾ ಬಲದ ಶಿಬಿರದಲ್ಲಿ ಕಾನ್‌ಸ್ಟೆಬಲ್‌ ಚಂದ್ರಭಾನ್‌ ಕುಮಾರ್‌ ಈ ಕೃತ್ಯ ಎಸಗಿರುವುದಾಗಿ ಕಂಕೇರ್‌ನ ಹೆಚ್ಚುವರಿ ಪೊಲೀಸ್‌ ಸುಪರಿಂಟೆಂಡೆಂಟ್‌ ಜೈಪ್ರಕಾಶ್‌ ಬಧಾಯಿ ತಿಳಿಸಿದ್ದಾರೆ. 

ಕುಮಾರ್‌ ಆತ್ಮಹತ್ಯೆಗೆ ಕಾರಣವೇನೆಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ. 26ರ ಹರೆಯದ ಕುಮಾರ್‌ ಬಿಹಾರದವರಾಗಿದ್ದಾರೆ. ಛತ್ತೀಸ್‌ಗಢದಲ್ಲಿನ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯ ದಳದಲ್ಲಿ ಕುಮಾರ್‌ ಕರ್ತವ್ಯ ನಿರ್ವಹಿಸುತ್ತಿದ್ದರು. ಸಶಸ್ತ್ರ ಸೀಮಾಬಲವು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ನಿಯಂತ್ರಣಕ್ಕೆ ಒಳಪಡುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next