Advertisement

ಶಾರದಾ ಚಿಟ್‌ ಫ‌ಂಡ್‌ ಹಗರಣ: ಕೋಲ್ಕತ ಮಾಜಿ ಪೊಲೀಸ್‌ ಆಯುಕ್ತರ ಬಂಧನ ಸಂಭವ

09:35 AM May 18, 2019 | Sathish malya |

ಹೊಸದಿಲ್ಲಿ : ಬಹುಕೋಟಿ ವಂಚನೆಯ ಶಾರದಾ ಚಿಟ್‌ ಫ‌ಂಡ್‌ ಹಗರಣದಲ್ಲಿ ಕೋಲ್ಕತ ಮಾಜಿ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರಿಗೆ ತಾನು ನೀಡಿದ್ದ ಬಂಧನ ರಕ್ಷಣೆಯ ಆದೇಶವನ್ನು ಸುಪ್ರೀಂ ಕೋರ್ಟ್‌ ಇಂದು ಶುಕ್ರವಾರ ತರವುಗೊಳಿಸಿದೆ.

Advertisement

ಪರಿಣಾಮವಾಗಿ ಅವರನ್ನು ಸಿಬಿಐ ಯಾವುದೇ ಹೊತ್ತಲ್ಲಿ ರಾಜೀವ್‌ ಕುಮಾರ್‌ ಬಂಧನವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಕಳೆದ ಫೆ.5ರಂದು ಸುಪ್ರೀಂ ಕೋರ್ಟ್‌ ಜಾರಿ ಮಾಡಿದ್ದ ಆದೇಶದಲ್ಲಿ ಕುಮಾರ್‌ ಅವರಿಗೆ ನೀಡಲಾಗಿರುವ ಮಧ್ಯಂತರ ಬಂಧನ ರಕ್ಷಣೆಯು ಇನ್ನೂ ಏಳು ದಿನಗಳ ಕಾಲ ಮುಂದುವರಿಯಲಿದೆ; ಈ ಅವಧಿಯಲ್ಲಿ ಅವರು ಅರ್ಹ ನ್ಯಾಯಾಲಯದಿಂದ ಕಾನೂನು ಪರಿಹಾರವನ್ನು ಪಡೆಯಬಹುದಾಗಿದೆ ಎಂದು ಹೇಳಿತ್ತು.

ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠವು, ಕುಮಾರ್‌ ಅವರ ಪ್ರಕರಣದಲ್ಲಿ ಕಾನೂನು ಪ್ರಕಾರ ನಡೆದುಕೊಳ್ಳುವಂತೆ ಸಿಬಿಐ ಅನ್ನು ಕೇಳಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next