Advertisement

ಶಾರದಾ ಚಿಟ್‌ ಹಗರಣ: ರಾಜೀವ್‌ ಕುಮಾರ್‌ಗೆ ಬಂಧನದಿಂದ 1 ತಿಂಗಳ ರಕ್ಷಣೆ

10:56 AM Jun 01, 2019 | Sathish malya |

ಕೋಲ್ಕತ : ಬಹು ಕೋಟಿ ಶಾರದಾ ಚಿಟ್‌ ಫ‌ಂಡ್‌ ಹಗರಣದಲ್ಲಿ ಕಲ್ಕತ್ತ ಹೈಕೋರ್ಟ್‌ ಇಂದು ಗುರುವಾರ ಪಶ್ಚಿಮ ಬಂಗಾಲದ ಹೆಚ್ಚುವರಿ ಸಿಐಡಿ ಮಹಾ ನಿರ್ದೇಶಕ ರಾಜೀವ್‌ ಕುಮಾರ್‌ ಗೆ ಬಂಧನ ಮತ್ತು ಬಲವಂತದ ಕ್ರಮದಿಂದ ಜುಲೈ 10ರ ವರೆಗೆ ರಕ್ಷಣೆ ನೀಡಿದೆ.

Advertisement

ಕಲ್ಕತ್ತ ಹೈಕೋರ್ಟಿನ ರಜಾ ಕಾಲದ ಪೀಠ ರಾಜೀವ್‌ ಕುಮಾರ್‌ ಗೆ ಜೂನ್‌ 10ರಿಂದ, ಬೇಸಗೆ ರಜೆ ಮುಗಿದು ಕೋರ್ಟ್‌ ಪುನಃ ತೆರೆಯುವ ವರೆಗಿನ, ಒಂದು ತಿಂಗಳ ಅವಧಿಗೆ ಬಂಧನದಿಂದ ರಕ್ಷಣೆ ನೀಡಿತು.

ಮಾತ್ರವಲ್ಲದೆ ಈ ಆದೇಶ ಪಾಸಾದ 24 ತಾಸುಗಳ ಒಳಗೆ ರಾಜೀವ್‌ ಕುಮಾರ್‌ ತನ್ನ ಪಾಸ್‌ ಪೋರ್ಟನ್ನು ಕೋರ್ಟಿಗೆ ಒಪ್ಪಿಸತಕ್ಕದ್ದು ಎಂದು ಕೂಡ ಕೋರ್ಟ್‌ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next