Advertisement

 ಸಂಸದ್‌ ಟಿವಿಯ ಯೂಟ್ಯೂಬ್‌ ಚಾನಲ್‌ ತಾತ್ಕಾಲಿಕ ಸ್ಥಗಿತ

10:58 AM Feb 16, 2022 | Team Udayavani |

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ನೇರಪ್ರಸಾರ ಮಾಡುವ ಸಂಸದ್‌ ಟಿವಿಯ ಯೂಟ್ಯೂಬ್‌ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದಕ್ಕೆ ಕಾರಣ ಹ್ಯಾಕರ್‌ಗಳು.

Advertisement

ಈ ವಾಹಿನಿಯ ಹೆಸರನ್ನು ಅವರು ಎಥೆರಿಯಮ್‌ ಎಂದು ಬದಲಿಸಿದ್ದರು. ಇದನ್ನು ಗಮನಿಸಿ ಯುಟ್ಯೂಬ್‌, ಸಂಸದ್‌ ಟಿವಿಯ ಯೂಟ್ಯೂಬ್‌ ಚಾನೆಲ್‌ ಅನ್ನು ನಿಷ್ಕ್ರಿಯಗೊಳಿಸಿದ್ದರು. ಆದರೆ, ಆರಂಭದಲ್ಲಿ ಯೂಟ್ಯೂಬ್‌ನ ನಿಯಮಗಳನ್ನು ಉಲ್ಲಂ ಸಿದ ಹಿನ್ನೆಲೆಯಲ್ಲಿ ಇದನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಯಿತು.

ಇವೆಲ್ಲ ನಡೆದಿದ್ದು ಸೋಮವಾರ ತಡರಾತ್ರಿ 1 ಗಂಟೆಗೆ. ವಿಷಯ ಗಮನಕ್ಕೆ ಬಂದ ತಕ್ಷಣ ಸಂಸದ್‌ ಟಿ.ವಿ.ಯ ಸಾಮಾಜಿಕ ತಾಣ ಪಡೆ ಕಾರ್ಯಪ್ರವೃತ್ತವಾಯಿತು. ಯೂಟ್ಯೂಬ್‌ ಕೂಡ ರಂಗಪ್ರವೇಶ ಮಾಡಿತು. ಅಂತೂ ಮಂಗಳವಾರ ಮುಂಜಾನೆ 3.45ಕ್ಕೆ ಕಾರ್ಯಾರಂಭ ಮಾಡಿತು.

 

Advertisement

Udayavani is now on Telegram. Click here to join our channel and stay updated with the latest news.

Next