Advertisement

ಸಾಣೂರು-ಮುರತ್ತಂಗಡಿ ಸೊಸೈಟಿನಲ್ಲಿ ಕಳ್ಳತನಕ್ಕೆ ವಿಫ‌ಲ ಯತ್ನ

11:46 PM Jan 10, 2023 | Team Udayavani |

ಕಾರ್ಕಳ: ಕಾರ್ಕಳ ತಾಲೂಕಿನ ಸಾಣೂರು-ಮುರತ್ತಂಗಡಿ ವ್ಯವಸಾಯಿಕ ಸಹಕಾರಿ ಸಂಘದ ಕಚೇರಿಗೆ ನುಗ್ಗಿ ಕಳ್ಳತನಕ್ಕೆ ಯತ್ನ ನಡೆಸಿದ ಘಟನೆ ಜ. 9ರಂದು ನಡೆದಿದೆ.

Advertisement

ಕಚೇರಿ ಸೋಮವಾರ ಎಂದಿನಂತೆ ಸಂಜೆವರೆಗೂ ಕಾರ್ಯಾಚರಿಸಿದೆ. ಸಂಜೆ ವೇಳೆಗೆ ಸಿಬಂದಿ ಮನೆಗೆ ತೆರಳಿದ್ದು ರಾತ್ರಿ ವೇಳೆ ಕಳ್ಳರು ಕಚೇರಿಯ ಕಿಟಿಕಿಗೆ ಅಳವಡಿಸಿದ್ದ ಕಬ್ಬಣಿದ ಸರಳುಗಳನ್ನು ತುಂಡರಿಸಿ ಒಳನುಗ್ಗಿದ್ದಾರೆ. ಕಚೇರಿ ವ್ಯಾಪ್ತಿಯಲ್ಲಿ 11 ಕಡೆ ಅಳವಡಿಸಿದ್ದ ಸಿಸಿ ಕೆಮರಾಗಳನ್ನು ಹಾನಿಗೊಳಿಸಿದ್ದಾರೆ.

ಕಚೇರಿಯ ಒಳಗೆ ದಾಖಲು ಪತ್ರಗಳೆಲ್ಲ ಚೆಲ್ಲಪಿಲ್ಲಿಯಾಗಿ ಬಿದ್ದಿವೆ. ಲಾಕರ್‌ ಒಡೆಯಲು ಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ಜ.10ರಂದು ಬೆಳಗ್ಗೆ ಬಾಗಿಲು ತೆರೆದ ವೇಳೆ ಘಟನೆ ಬೆಳಕಿಗೆ ಬಂದಿದೆ. ನಗದು, ಆಭರಣ ಇತ್ಯಾದಿಗಳು ಕಳ್ಳತನಗಳಾಗಿಲ್ಲ, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಪೊಲೀಸ್‌ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಯಿಸಿ ಶೋಧಿಸಲಾಯಿತು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next