Advertisement

ಹುಣಸೂರಿನ ರಾಮಮಂದಿರಗಳಲ್ಲಿ ಸರಳ ಸಂಕ್ರಾಂತಿ ಆಚರಣೆ

07:56 PM Jan 15, 2022 | Team Udayavani |

ಹುಣಸೂರು: ಸಂಕ್ರಾಂತಿ ಅಂಗವಾಗಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ನಗರದ ವಿವಿಧ ಶ್ರೀರಾಮ ಮಂದಿರಗಳ ಭಜನಾ ತಂಡಗಳವತಿಯಿಂದ ಭಜನೆ, ರಾಮಮಂದಿರದಲ್ಲಿ ವಿಶೇಷ ಪೂಜೆ ಆಯೋಜಿಸಿ ಪ್ರಸಾದ ವಿತರಿಸಿದರು. ಎಲ್ಲಡೆ ವೀಕ್ ಎಂಡ್ ಕಫ್ಯೂ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿದರು.

Advertisement

ಧನುರ್ಮಾಸದ ಅಂಗವಾಗಿ ಕಳೆದ ಒಂದು ತಿಂಗಳಿನಿಂದ ಮುಂಜಾನೆ ನಗರದ ವಿವಿಧ ಬಡಾವಣೆಗಳ ಭಕ್ತರು ಲಕ್ಷö್ಮಣತೀರ್ಥ ನದಿ ತಟದ ಅಶ್ವತ್ಥ ಕಟ್ಟೆಗೆ ಪೂಜೆ ಸಲ್ಲಿಸಿದ ನಂತರ ಅಲಂಕೃತ ಮಂಟಪದಲ್ಲಿ ರಾಮದೇವರ ಭಾವಚಿತ್ರವಿರಿಸಿ. ಭಜನಾ ತಂಡಗಳು ರಾಮನ ಭಜನೆ ಮಾಡುತ್ತಾ ಮೆರವಣಿಗೆ ನಡೆಸಿ, ನಂತರ ರಾಮಮಂದಿರಗಳಲ್ಲಿ ನಿತ್ಯ ಸರಳವಾಗಿ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗಿಸಲಾಗಿತ್ತು.  ಧನುರ್ಮಾಸದ ಕೊನೆಯದಿನ ಸಂಕ್ರಾಂತಿಯಂದು ಆಯಾ ರಾಮಮಂದಿರಗಳ ಬಡಾವಣೆಯ ಬೀದಿಗಳಲ್ಲಿ ಭಜನೆ ಮಾಡುತ್ತಾ, ದೇವರ ಮೆರವಣಿಗೆ ನಡೆಸುವ ವೇಳೆ ಮನೆಗಳವರು ಪೂಜೆ ಸಲ್ಲಿಸುವುದು ವಾಡಿಕೆ. ಸಂಪ್ರದಾಯದAತೆ ಮುಂಜಾನೆಯೇ ನದಿ ತಟದ ಅಶ್ವತ್ಥಕಟ್ಟೆಗೆ ಪೂಜೆ ಸಲ್ಲಿಸಿದ ವಿವಿಧ ಬಡಾವಣೆಗಳ ರಾಮಮಂದಿರದ ಭಜನಾ ತಂಡಗಳು ಉತ್ಸವ ಮೂರ್ತಿಯೊಂದಿಗೆ ರಾಮನಾಮ ಪಠಿಸುತ್ತಾ ಬೀದಿಗಳಲ್ಲಿ ಸಾಗಿಬಂದು ರಾಮ ಮಂದಿರಗಳಲ್ಲಿ ಭಜನೆ ಅಂತ್ಯಗೊಳಿಸಿದರು. ಭಕ್ತರು ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು. ನಂತರ ರಾಮಮಂದಿರದಲ್ಲಿ ದೇವರಿಗೆ ವಿವಿಧ ಅಭಿಷೇಕ, ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು.

ಉಳಿದಂತೆ ಸ್ಟೋರ್ ಬೀದಿ, ಗಣೇಶನಗುಡಿ ಬೀದಿ ರಾಮಮಂದಿರ, ಜೆಎಲ್.ಬಿರಸ್ತೆಯ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಭಜನೆ ನಡೆಸಿದರು. ಗಣೇಶಗುಡಿ ಬೀದಿ ಹಾಗೂ ಹಾರಂಗಿ ಕಚೇರಿ ಆವರಣದ ಗಣೇಶ ದೇವಾಲಯ, ಮುತ್ತುಮಾರಮ್ಮ, ಮಂಜುನಾಥಸ್ವಾಮಿ ದೇವಾಸ್ಥಾನಗಳಲ್ಲಿ ಕೊರೊನಾ ವೀಕ್ ಎಂಡ್ ಕಫ್ಯೂ ಹಿನ್ನೆಲೆಯಲ್ಲಿ ಧ್ವನಿವರ್ಧಕ ಬಳಸದೆ ಸರಳವಾಗಿ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next