Advertisement

ಸಂಕೇಶ್ವರದಲ್ಲಿ ಭೀಕರ ಅಪಘಾತ: ಒಂದೇ ಬೈಕ್ ನಲ್ಲಿದ್ದ ನಾಲ್ವರು ಯುವಕರ ಸಾವು

11:50 AM Feb 25, 2022 | Team Udayavani |

ಸಂಕೇಶ್ವರ : ನಗರದ ಹೊರ ವಲಯದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಮೃಪಟ್ಟಿರುವ ಘಟನೆ ನಡೆದಿದೆ.

Advertisement

ರಾತ್ರಿ 11.30 ರ ವೇಳೆ ನಡೆದ ಭೀಕರ ಅವಘಡದಲ್ಲಿ ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ಸ್ಥಳದಲ್ಲಿಯೇ ಅಸುನಿಗಿದರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತ ದುರ್ದೈವಿಗಳು ಬಸವರಾಜ ಮಾಳಿ(26), ಪ್ರವೀಣ ಸನದಿ(29), ಮೆಹಬೂಬ ಸೆಗಡಿ(21), ಫರಾಣ ಜಮಾದಾರ (21) ಎನ್ನುವವರಾಗಿದ್ದಾರೆ.

ತಡರಾತ್ರಿ ನಾಲ್ವರು ಗೆಳೆಯರು ದ್ವಿಚಕ್ರ ವಾಹನದಲ್ಲಿ ಕಣಗಲಾ ಕಡೆಯಿಂದ ಸಂಕೇಶ್ವರ ಕಡೆಗೆ ಬರುತ್ತಿರುವಾಗ ಸಂಕೇಶ್ವರ ನಗರದ ಹೊರ ವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಆವಘಡ ನಡೆದಿದೆ. ಯಾವ ವಾಹನ ಢಿಕ್ಕಿಯಾಗಿ ಅವಘಡ ನಡೆದಿದೆ ಎನ್ನುವ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ. ಸ್ಥಳದಲ್ಲಿ ಯುವಕರು ಪ್ರಯಾಣಿಸುತ್ತಿದ್ದ ಬೈಕ್ ಜಖಂ ಆಗಿ ಬಿದ್ದಿರುವುದು ಕಂಡು ಬಂದಿದೆ.

ಘಟನಾ ಸ್ಥಳಕ್ಕೆ ಸಂಕೇಶ್ವರ ಸಿಪಿಐ ಪ್ರಹ್ಲಾದ ಚನ್ನಗಿರಿ, ಪಿಎಸ್.ಐ ಗಣಪತಿ ಕೊಂಗನೊಳಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಮೃತಪಟ್ಟಿರುವ ನಾಲ್ವರಲ್ಲಿ ಬಸವರಾಜ, ಪ್ರವೀಣ, ಮೆಹಬೂಬ್, ಈ ಮೂವರು ಮೂವರು ಸಂಕೇಶ್ವರದ ಅನಂತ ವಿದ್ಯಾ ನಗರದ ನಿವಾಸಿಗಳಾಗಿದ್ದು,ಇನ್ನೋರ್ವ ಫರಾಣ ಈತ ಬೆಳಗಾವಿಯ ಖಂಜರ್ ಗಲ್ಲಿಯ ಯುವಕನಾಗಿದ್ದಾನೆ ಎಂದು ತಿಳಿದು ಬಂದಿದೆ.

ಸಂಕೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next