Advertisement

ಸಂಜಯ್‌ ಲೀಲಾ “ಪದ್ಮಾವತಿ’ಸೆಟ್‌ಗೆ ಮತ್ತೆ ದುಷ್ಕರ್ಮಿಗಳಿಂದ ಬೆಂಕಿ

12:21 PM Mar 15, 2017 | Team Udayavani |

ಹೊಸದಿಲ್ಲಿ : ತಿಂಗಳ ಹಿಂದೆ ಜೈಪುರದ ಜಯಗಢ ಕೋಟೆಯಲ್ಲಿ ಸ್ಥಳೀಯ ಕರಣಿ ಸೇನಾ ಕಾರ್ಯಕರ್ತರು ಬಾಲಿವುಡ್‌ ಚಿತ್ರ ನಿರ್ಮಾಪಕ, ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಅವರ “ಪದ್ಮಾವತಿ’ ಚಿತ್ರದ ಸೆಟ್‌ ಮೇಲೆ ದಾಳಿಗೈದು ಅದನ್ನು ಧ್ವಂಸಗೈದ ಹಿಂಸಾತ್ಮಕ ಘಟನೆ ನೆನಪಿನ ಪಟಲದಿಂದ ಮಾಸುವ ಮುನ್ನವೇ ಇದೀಗ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ  ಅದೇ ರೀತಿಯ ಹಿಂಸಾತ್ಮಕ ಘಟನೆ ಮರುಕಳಿಸಿದೆ.

Advertisement

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಂಜಯ್‌ ಲೀಲಾ ಭನ್ಸಾಲಿ ಅವರ “ಪದ್ಮಾವತಿ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ಯಾವುದೋ ಅನಾಮಿಕ ಕ್ಷುದ್ರ  ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿ ಸೆಟ್‌ಗೆ ಬೆಂಕಿ ಹಾಕಿದೆ.

ಘಟನೆಯ ಮಾಹಿತಿಯನ್ನು ಪಡೆದು ಧಾವಿಸಿ ಬಂದಿರುವ ಪೊಲೀಸರು ಈ ಅಪರಿಚಿತ ದುಷ್ಕರ್ಮಿಗಳನ್ನು ಬಂಧಿಸಿ ಪೊಲೀಸ್‌ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಟಿವಿ ವರದಿ ತಿಳಿಸಿದೆ. 

ಆರಂಭಿಕ ಟಿವಿ ವರದಿಗಳ ಪ್ರಕಾರ ಅಪರಿಚಿತ ದುಷ್ಕರ್ಮಿಗಳ ಗುಂಪು ನಿನ್ನೆ ತಡ ರಾತ್ರಿ ಪದ್ಮಾವತಿ ಸೆಟ್‌ಗೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಇಂದು ಬೆಳಗ್ಗೆ ಪೊಲೀಸರಿಗೆ ದೂರು ನೀಡಲಾಗಿರುವುದಾಗಿ ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next