Advertisement

ವೀರಪ್ಪನ್‌ ಗ್ಯಾಂಗ್‌ ಮಣಿಸಿದ್ದ ಅರೋರಾ ದಿಲ್ಲಿ ಪೊಲೀಸ್‌ ಆಯುಕ್ತ

08:21 AM Aug 01, 2022 | Team Udayavani |

ನವದೆಹಲಿ: ಕಾಡುಗಳ್ಳ ವೀರಪ್ಪನ್‌ ಗ್ಯಾಂಗ್‌ ಅನ್ನು ಬಗ್ಗು ಬಡಿದಿದ್ದ ತಮಿಳುನಾಡು ಕೇಡರ್‌ನ 1988ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಸಂಜಯ ಅರೋರಾ ದೆಹಲಿಯ ನೂತನ ಪೊಲೀಸ್‌ ಆಯುಕ್ತರಾಗಲಿದ್ದಾರೆ. ಅವರು ಸೋಮವಾರ ಹಾಲಿ ಆಯುಕ್ತ ರಾಕೇಶ್‌ ಆಸ್ತಾನಾರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಸದ್ಯ ಅರೋರಾ ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ನ (ಐಟಿಬಿಪಿ) ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಇದೊಂದು “ಇಂಟರ್‌ ಕೇಡರ್‌ ಡೆಪ್ಯೂಟೇಶನ್‌’ ಮಾದರಿಯಡಿ ಆಗಿರುವ ವರ್ಗಾವಣೆ. ತಮಿಳುನಾಡು ಕೇಡರ್‌ನವರಾದ ಅವರನ್ನು ಅರುಣಾಚಲ ಪ್ರದೇಶ, ಗೋವಾ, ಮಿಜೋರಂ ಹಾಗೂ ಕೇಂದ್ರಾಡಳಿತ ಪ್ರದೇಶಗಳ (ಎಜಿಎಂಯುಟಿ) ಕೇಡರ್‌ಗೆ ವರ್ಗಾವಣೆ ಮಾಡಲು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸ್ಪರ್ಧಾ ಪ್ರಾಧಿಕಾರ (ಕಾಂಪಿಟೆಂಟ್‌ ಅಥಾರಿಟಿ) ಒಪ್ಪಿಗೆ ನೀಡಿದೆ. ಅದರ ಪರಿಣಾಮವಾಗಿ, ಅರೋರಾ ಅವರು ದೆಹಲಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಮೂರನೇ ಬಾರಿ: ಬೇರೊಂದು ಕೇಡರ್‌ನಲ್ಲಿರುವ ಐಪಿಎಸ್‌ ಅಧಿಕಾರಿಯೊಬ್ಬರನ್ನು ಎಜಿಎಂಯುಟಿ ಕೇಡರ್‌ಗೆ ವರ್ಗಾವಣೆ ಮಾಡಿ, ದೆಹಲಿ ಪೊಲೀಸ್‌ ಆಯುಕ್ತರಾನ್ನಾಗಿಸಿರುವುದು ಇದು ಮೂರನೇ ಬಾರಿ.

ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಭಾಗಿ
80-90ರ ದಶಕದಲ್ಲಿ ಇಡೀ ದಕ್ಷಿಣ ಭಾರತದಲ್ಲಿ ತಲ್ಲಣ ಸೃಷ್ಟಿಸಿದ್ದ ಕಾಡುಗಳ್ಳ ವೀರಪ್ಪನ್‌ನನ್ನು ಹಿಡಿಯಲು ತಮಿಳುನಾಡು ಸರ್ಕಾರ ನೇಮಿಸಿದ್ದ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿಗಳ ಶೌರ್ಯ ಪದಕವೂ ಲಭಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next