Advertisement
ಇಲ್ಲಿಯ ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆ ಘಟಕ ಮಹಾವಿದ್ಯಾಲಯ ಮತ್ತು ರಾಚವಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ರವಿವಾರ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಣಿಜ್ಯ ಪದವಿ ಮಟ್ಟದಲ್ಲಿ ಸಿ.ಬಿ.ಸಿ.ಎಸ್. ಪಠ್ಯಕ್ರಮ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ರಾ.ಚ.ವಿ.ಯ ವಾಣಿಜ್ಯಶಾಸ್ತ್ರ ವಿಭಾಗದ ಕಾರ್ಯಾಧ್ಯಕ್ಷ ಪ್ರೋ | ಬಿ.ಎಸ್.ನಾವಿ ಅವರು ಕೌಶಲ್ಯ ವರ್ಧನೆಯ ವಿವಿಧ ಆಯಾಮಗಳ ಬಗ್ಗೆ ಮಾತನಾಡಿ ಕೌಶಲ್ಯವರ್ಧನೆಗಾಗಿ ವಿದ್ಯಾರ್ಥಿಗಳನ್ನು ಕ್ಷೇತ್ರ ಕಾರ್ಯಗಳಿಗೆ ನಿಯೋಜಿಸಿ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಅವರ ಸಂವಹನ ಕಲೆಯನ್ನು ಅಭಿವೃದ್ಧಿಗೊಳಿಸಬಹುದು ಎಂದರು.
ಇದನ್ನೂ ಓದಿ :ಸಿಬಿಐ ದಾಳಿಗೆ ಆಕ್ರೋಶ: ಸಿಎಂ ಯಡಿಯೂರಪ್ಪ ಮನೆಗೆ ಮುತ್ತಿಗೆ ಯತ್ನ
ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಚಿಕ್ಕೋಡಿಯ ಪ್ರೋ . ಬಿ.ಎಸ್.ಮಾಳಿ, ಜಮಖಂಡಿಯ ಪ್ರೋ . ಕೆ.ಎಸ್.ಪಾಟೀಲ, ಸಿಂದಗಿಯ ಡಾ. ಆರ್.ಎಂ.ಪಾಟೀಲ, ಖಾನಾಪೂರದ ಪ್ರೋ.ಎಸ್ .ಜಿ.ಸೊನ್ನದ ಅವರನ್ನು ಸನ್ಮಾನಿಸಲಾಯಿತು. ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಜಯಪ್ಪ, ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಶಿಕ್ಷಕರ ಮಹಾಮಂಡಳದ ಅಧ್ಯಕ್ಷ ಡಾ. ಚಂದ್ರಶೇಖರ ಗುಡಸಿ, ರಾ.ಚ.ವಿ. ಸ್ಕೂಲ್ಆಫ್ ಬಿಸಿನೆಸ್ ಆ್ಯಂಡ್ ಎಕನಾಮಿಕ್ಸ್ ನ ಡೀನ್ ಡಾ. ಎಸ್ .ಬಿ.ಆಕಾಶ ಉಪಸ್ಥಿತರಿದ್ದರು. ಪ್ರೋ. ಸಂಗೀತಾ ತೊಲಗಿ ಪ್ರಾರ್ಥಿಸಿದರು.
ಪ್ರೋ. ಗುರುಪಾದ ಜುನಾಯಕರ್ ಸ್ವಾಗತಿಸಿದರು. ಡಾ. ವಿದ್ಯಾ ಜಿರಗೆ ನಿರೂಪಿಸಿದರು. ಪ್ರೋ.ಅನಿಲ ರಾಮದುರ್ಗ ವಂದಿಸಿದರು.ಕಾರ್ಯಾಗಾರದಲ್ಲಿ ವಿಜಯಪೂರ, ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಯ ನೂರಕ್ಕೂ ಅಧಿಕ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.