Advertisement

ವೇದಗಳಲ್ಲೂ ತಾಯಿಗೆ ಮೊದಲ ಸ್ಥಾನ

04:20 PM Jun 23, 2019 | Naveen |

ಸಂಡೂರು: ವೇದಗಳ ಕಾಲದಿಂದಲೂ ಸಹ ಸ್ತ್ರೀಯನ್ನು ಮಾತೆ ಎಂದು ಪ್ರಥಮ ಸ್ಥಾನ ನೀಡಿದ್ದೇವೆ. ಮಾತೃದೇವೋಭವ, ಪಿತೃದೇವೋ ಭವ, ಆಚಾರ್ಯದೇವೋ ಭವ ಎನ್ನುವಂತೆ ಜಗನ್ಮಾತೆ ತಾಯಮ್ಮ ಪ್ರತಿಷ್ಠಾಪನೆಯ ವಾರ್ಷಿಕೋತ್ಸವವನ್ನು ಸಂಗೀತ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಡಾ. ವೃಷಬೇಂದ್ರ ಆಚಾರ್‌ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ತಾಯಮ್ಮ ದೇವಸ್ಥಾನದ ಅವರಣದಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಾವು ವೈಚಾರಿಕ, ಭೌತಿಕವಾಗಿಯೂ ಸಹ ಪುರಾತನ ಕಾಲದಿಂದಲೂ ಅಮ್ಮನ ಹಬ್ಬಗಳನ್ನು ಮಾಡುತ್ತಾ ಬಂದಿದ್ದೇವೆ. ಜಗತ್ತಿನಲ್ಲಿ ಇಂದು ಯಾವುದೇ ಕೆಟ್ಟ ಮಗನನ್ನು ಕಾಣಬಹುದು. ಆದರೆ ಕೆಟ್ಟ ತಾಯಿಯನ್ನು ಎಲ್ಲಿಯೂ ಕಾಣಲು ಸಾಧ್ಯವಿಲ್ಲ, ಆದ್ದರಿಂದ ಪ್ರತಿಯೊಬ್ಬರೂ ಸಹ ಅಮ್ಮನ ಮಡಿಲಿನಲ್ಲಿ ಬೆಳೆದವರು. ಅವರ ಆರೈಕೆಯಲ್ಲಿ ಕಲಿತವರು. ದೇವಿ ತಾಯಮ್ಮನ ಅಶೀರ್ವಾದವೂ ಪ್ರತಿಯೊಬ್ಬರಿಗೆ ಇರಲಿ ಎಂದರು.

ತಬಲಾವಾದಕ ಎಚ್.ಕುಮಾರಸ್ವಾಮಿ ಮಾತನಾಡಿ, ಪೂಜೆಯನ್ನು ನಾವು ಸಂಗೀತದ ಮೂಲಕ ಮಾಡುತ್ತೇವೆ. ಕಾರಣ ನಮ್ಮ ತನುಮನಗಳು ಶುದ್ಧವಾಗಲೆಂದು, ಅಲ್ಲದೆ ಅದು ವೈಜ್ಞಾನಿಕವಾಗಿಯೂ ಸಹ ನಮ್ಮ ಆರೋಗ್ಯ ರಕ್ಷಿಸುತ್ತದೆ. ಯೋಗ ಎಷ್ಟು ಮುಖ್ಯವೋ, ಅದೇ ರೀತಿಯಲ್ಲಿ ಸಂಗೀತವೂ ಸಹ ನಮ್ಮ ಆರೋಗ್ಯ ರಕ್ಷಿಸುತ್ತದೆ ಎಂದರು.

ಸಂಗೀತ ಶಿಕ್ಷಕ ಟಿ.ವೆಂಕಟೇಶ್‌, ಲೋಕೇಶ್‌, ಕಲಾವಿದರೂ, ನಿವೃತ್ತ ಪ್ರಾಚಾರ್ಯ ಡಾ. ವೃಷಬೇಂದ್ರ ಅಚಾರ್‌ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಚ್.ಕುಮಾರಸ್ವಾಮಿ ತಬಲಾ ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next