Advertisement

ಗುಡುಗು ಸಹಿತ ಉತ್ತಮ ಮಳೆ

02:58 PM Apr 11, 2019 | Naveen |

ಸಂಡೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಓಬಳಾಪುರ, ದೇವರ ಬುಡ್ಡೇನಹಳ್ಳಿ ಗ್ರಾಮದಲ್ಲಿ ಕೆಲವು ಮನೆಗಳಿಗೆ ಹಾಕಿದ್ದ ಸಿಮೆಂಟ್‌ ತಗಡಿನ ಶೀಟ್‌ಗಳು ಹಾರಿ
ಹೋಗಿವೆ.

Advertisement

ತಾಲೂಕಿನ ಎಸ್‌. ಓಬಳಾಪುರ, ಗೌರಿಪುರ, ತಿಪ್ಪನಮರಡಿ, ಸೋವೇನಹಳ್ಳಿ, ಬೊಮ್ಮಘಟ್ಟ, ಚೋರನೂರು, ಸಂಡೂರು, ತಾರಾನಗರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು ಹಾಗೂ ಆನೆಕಲ್ಲು ಸಹಿತ ಮಳೆಯಾಗಿದೆ.

ಓಬಳಾಪುರ, ದೇವರ ಬುಡ್ಡೇನಹಳ್ಳಿ ಗ್ರಾಮದಲ್ಲಿ ಸುರಿದ ಮಳೆಯಿಂದಾಗಿ
ಉಮಾದೇವಿ, ಸುಮಂಗಲಮ್ಮ, ಗೌರಮ್ಮ, ದಾನಮ್ಮ, ಅಂಕಮನಾಳ ಗ್ರಾಮದಲ್ಲಿ ತಿಮ್ಮಕ್ಕ, ಲಕ್ಷ್ಮೀ , ಸಾರಮ್ಮ, ಮಾರೆಮ್ಮ, ರಾಜಮ್ಮ, ಓಬಕ್ಕ, ನಿರ್ಮಲ, ಗಂಗಮ್ಮ, ಹುಲಿಗೆಮ್ಮ, ತಿಮ್ಮಕ್ಕ, ಲಕ್ಷ್ಮೀ , ಓಬಮ್ಮ, ಪವಿತ್ರಾ, ಕಾಳಮ್ಮ ಎಂಬುವರಿಗೆ ಸೇರಿದ ಮನೆಗಳ ಮೇಲಿನ ಸಿಮೆಂಟ್‌ ತಗಡಿನ ಶೀಟ್‌ ಗಳು ಭಾರೀ ಬಿರುಗಾಳಿಗೆ ಹಾರಿ ಹೋಗಿವೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಕೆರೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಇನ್ನು ಭುಜಂಗನಗರ ಗಟಾರದಲ್ಲಿ ಕಸಕಡ್ಡಿ, ಪ್ಲಾಸ್ಟಿಕ್‌ ಕವರ್‌ಗಳು ತುಂಬಿ ಹೋಗಿದ್ದು, ಕಸ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಿಡಿಲಿಗೆ 6 ಮೇಕೆ, 3 ಕುರಿ ಸಾವು ಸಂಡೂರು: ತಾಲೂಕಿನ ತಿಪ್ಪನಮರಡಿ ಗ್ರಾಮದಲ್ಲಿ ಸಿಡಿಲು ಬಡಿದು 6 ಮೇಕೆ, 3 ಕುರಿಗಳು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಒಡೇರಹಳ್ಳಿ ಗ್ರಾಮದ ಸಣ್ಣ ಬೊಮ್ಮಯ್ಯ ಎಂಬುವರು ತಿಪ್ಪನಮರಡಿ ಗ್ರಾಮದ ಹೊಲದಲ್ಲಿ ಕುರಿಗಳನ್ನು ತಂಗಿಸಿದ್ದರು. ಈ ವೇಳೆ ಮಂಗಳವಾರ ರಾತ್ರಿ ಸಿಡಿಲು ಬಡಿದು ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next