Advertisement

 ಅರಣ್ಯ ಅಧಿಕಾರಿಗಳ ಭರ್ಜರಿ ಭೇಟೆ :  25 ಲಕ್ಷ ಮೌಲ್ಯದ ಶ್ರೀಗಂಧ ವಶ

05:52 PM Jun 17, 2021 | Team Udayavani |

ಧಾರವಾಡ : ರಾಜ್ಯದಿಂದ ಹೊರ  ರಾಜ್ಯದ ಸಂಪರ್ಕದ ಮೂಲಕ ದುಬೈಗೆ ಶ್ರೀಗಂಧ ಮತ್ತು ಅದರ ತೈಲವನ್ನು ಕಳ್ಳಸಾಗಣೆ ಮಾಡುವ ಜಾಲವೊಂದನ್ನು ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಅಂದಾಜು 25 ಲಕ್ಷ ರೂ. ಮೌಲ್ಯದ 250 ಕೆ.ಜಿ. ಶ್ರೀಗಂದವನ್ನು ವಾಹನವೊಂದರ ಮೂಲಕ ಆಂದ್ರ ಪ್ರದೇಶಕ್ಕೆ ಸಾಗಾಣಿಕೆ ಮಾಡುತ್ತಿರುವಾಗ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ವೈರಲ್; ಗಲಭೆ ನಿಯಂತ್ರಣದ ವೇಳೆ ಪ್ಲಾಸ್ಟಿಕ್ ಕುರ್ಚಿ, ಬುಟ್ಟಿ ಬಳಕೆ ಮಾಡಿದ ಪೊಲೀಸರ ಅಮಾನತು

ಚಿಕ್ಕಮಗಳೂರಿನ ಗುರುಮೂರ್ತಿ, ಗದಗನ ಮುದಕಪ್ಪ ಪುಜೇರ್.ಹಿರಿಯಪ್ಪ ಹಿರೇಮನಿ ಹಾಗೂ ಹಾವೇರಿಯ  ಭೀಮಪ್ಪ ಸುಣಗಾರ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಸಿಬ್ಬಂದಿ ಅಂತಾರಾಷ್ಟ್ರೀಯ ಮಟ್ಟದ ಸಂಬಂದ ಇರುವ ಈ ಜಾಲದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next