Advertisement

ಶ್ರೀಗಂಧದ ಮರ ಕಳ್ಳತನ: 145 ಕೆಜಿ ಮಾಲು ಸಮೇತ ಮೂವರು ಆರೋಪಿಗಳ ಬಂಧನ

11:31 AM Nov 23, 2021 | Shwetha M |

ಮುದ್ದೇಬಿಹಾಳ: ತಾಲೂಕಿನ ಕೇಸಾಪೂರದಲ್ಲಿ ಶ್ರೀಗಂಧ ಮರ ಕತ್ತರಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಗಳ್ಳರ ತಂಡದ ಮೇಲೆ ಅರಣ್ಯ ಇಲಾಖೆ ತಂಡ ದಾಳಿ ನಡೆಸಿ 145 ಕೆಜಿ ಮಾಲು ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಕೇಸಾಪೂರದ ಸಿದ್ದಪ್ಪ ಜೆಟ್ಟೆಪ್ಪ ಪೂಜಾರಿ, ಆಲೂರಿನ ಮರಿಯಪ್ಪ ನಿಂಗಪ್ಪ ಘಾಳಪೂಜಿ ಹಾಗೂ ಯಮನಪ್ಪ ಶಿವಪ್ಪ ಮಾದರ ಆರೋಪಿಗಳಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ವಿಜಯಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ಎಂ.ಪ್ರಶಾಂತ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ಚವ್ಹಾಣ ಮಾರ್ಗದರ್ಶನದಲ್ಲಿ ಮುದ್ದೇಬಿಹಾಳ ಉಪ ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ, ಎಂ.ಎಚ್.ತೇಲಿ, ಆರ್.ಎಸ್.ಮೆಟಗುಡ್ಡ, ಬಿ.ಎಸ್.ಕೊಣ್ಣೂರ ಅವರ ನೇತೃತ್ವ ತಂಡ ರಾತ್ರಿ ಕಾರ್ಯಾಚರಣೆ ನಡೆಸಿ  ಕೇಸಾಪೂರ ದ್ಯಾಮವ್ವನ ದೇವಸ್ಥಾನದ ಆವರಣದಲ್ಲಿದ್ದ ಶ್ರೀಗಂಧ ಗಿಡವನ್ನು ಕತ್ತರಿಸಿ ತುಂಡು ಮಾಡಿ ಸಾಗಿಸಲು ಮುಂದಾಗಿದ್ದಾಗ ಈ ದಾಳಿ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next