Advertisement

ಶ್ರೀಗಂಧ ಕಳ್ಳರನ್ನು ಹಿಡಿದು ಥಳಿಸಿದ ಗ್ರಾಮಸ್ಥರು

04:00 PM Nov 29, 2019 | keerthan |

ಚಿಕ್ಕಮಗಳೂರು: ಶ್ರೀಗಂಧದ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ಕಳ್ಳನನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಶ್ರಿಗಂಧ ಕಳವಿನ ವೇಳೆ ಹಿಡಿಯಲು ಬಂದ ಗ್ರಾಮಸ್ಥರಿಗೆ ಕಳ್ಳರು ವಿಚಿತ್ರ ಮಾಸ್ಕ್ ಹಾಕಿ ಭಯ ಹುಟ್ಟಿಸುತ್ತಿದ್ದರು ಎನ್ನಲಾಗಿದೆ.

ತಂಡದಲ್ಲಿ ಒಟ್ಟು ಐವರಿದ್ದು, ಅದರಲ್ಲಿ ನಾಲ್ವರು ತಪ್ಪಿಸಿಕೊಂಡಿದ್ದು, ಓರ್ವ ಗ್ರಾಮಸ್ಥರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.  ಸಿಕ್ಕಿಬಿದ್ದ ಅರೇಹಳ್ಳಿ ಗ್ರಾಮದ ಅಣ್ಣಪ್ಪನಿಗೆ ಗ್ರಾಮಸ್ಥರು ಸರಿಯಾಗಿ ಗೂಸಾ ನೀಡಿದ್ದು, ನಂತರ ಮೂಡಿಗೆರೆ ಅರಣ್ಯ ಇಲಾಖೆ ವಶಕ್ಕೆ ನೀಡಿದ್ದಾರೆ.

5 ಶ್ರೀಗಂಧದ ತುಂಡು, ಆಪೆ ಆಟೋ ಮತ್ತು ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next