Advertisement

ಕೀಬೋರ್ಡ್ ಬಿಟ್ಟು ಗುದ್ದಲಿ ಹಿಡಿದ ಹಂಸಲೇಖ:ಸಂಗೀತಮಾಂತ್ರಿಕನ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ

10:42 AM Apr 22, 2020 | Mithun PG |

ಬೆಂಗಳೂರು: ಕೋವಿಡ್-19 ಲಾಕ್ ಡೌನ್ ​​ನ  ಅವಧಿಯಲ್ಲಿ ಚಿತ್ರರಂಗ ಸಂಪೂರ್ಣ ಸ್ತಬ್ಧವಾಗಿದೆ. ಹಲವು ನಟ-ನಟಿಯರು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ನೆರವಿನ ಹಸ್ತ ಚಾಚುತ್ತಿದ್ದಾರೆ. ಅಂತೆಯೇ ಸ್ಯಾಂಡಲ್​ವುಡ್​ನ ಸಂಗೀತ ಮಾಂತ್ರಿಕ ಹಂಸಲೇಖ ಲಾಕ್​ಡೌನ್​ ಅವಧಿಯಲ್ಲಿ ವಿಶೇಷ ಕಾರ್ಯವೊಂದನ್ನು ಮಾಡಿದ್ದಾರೆ.

Advertisement

ಹಂಸಲೇಖ ಅವರು ಕೈಯಲ್ಲಿ ಹಾರೆ, ಗುದ್ದಲಿ  ಹಿಡಿದುಕೊಂಡು ರಸ್ತೆಗೆ ಕಾಂಕ್ರೀಟ್​​ ಹಾಕುವ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ತಮ್ಮ ಮನೆಯ ಮುಂದೆ ಹಾದು ಹೋಗುವ ರಸ್ತೆಯ ಗುಂಡಿಯನ್ನು ಮುಚ್ಚಿದ್ದಾರೆ.

ಇತ್ತೀಚಿಗಷ್ಟೆ ಹಂಸಲೇಖ ಅವರು ಕೋವಿಡ್ 19 ವಿರುದ್ಧ  ಜಾಗೃತಿ ಮೂಡಿಸಲು ಬಾಯ್​ ಬಾಯ್​ ಕೋವಿಡ್  ಹಾಡನ್ನು ರಚಿಸಿ, ಸಂಗೀತ ಸಂಯೋಜಿಸಿ ಬಿಡುಗಡೆ ಮಾಡಿದ್ದರು. ಈ ಹಾಡನ್ನು ಅವರ ಪತ್ನಿ ಮತ್ತು ಮಗಳೊಂದಿಗೆ ಹಾಡಿಸಿದ್ದರು. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next