Advertisement

ಸಿನಿ ಅಖಾಡಕ್ಕೆ ಜನಾರ್ದನ ರೆಡ್ಡಿ ಪುತ್ರ

11:39 AM Mar 02, 2022 | Team Udayavani |

ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಲಾಂಚ್‌ ಆಗಲಿದ್ದಾರೆಂಬ ಸುದ್ದಿ ಅನೇಕ ತಿಂಗಳುಗಳಿಂದ ಓಡಾಡುತ್ತಲೇ ಇತ್ತು. ಆದರೆ, ಯಾವಾಗ ಮತ್ತು ನಿರ್ದೇಶನ, ನಿರ್ಮಾಣದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ, ಈಗ ಬಹುತೇಕ ಎಲ್ಲವೂ ಅಂತಿಮವಾಗಿದೆ.

Advertisement

ಕಿರೀಟಿ ಕನ್ನಡ ಹಾಗೂ ತೆಲುಗಿನಲ್ಲಿ ಲಾಂಚ್‌ ಆಗಲಿದ್ದು, ರಾಧಾಕೃಷ್ಣ ಎನ್ನುವವರು ಈ ಸಿನಿಮಾದ ನಿರ್ದೇಶಕರು. ಚಿತ್ರವನ್ನು ತೆಲುಗಿನ ಹೆಸರಾಂತ ನಿರ್ಮಾಣ ಸಂಸ್ಥೆ ವಾರಾಹಿ ಫಿಲಂಸ್‌ ನಿರ್ಮಿಸುತ್ತಿದ್ದು, ಸಾಯಿ ಕೊರಪಾಠಿ ನಿರ್ಮಿಸುತ್ತಿದ್ದಾರೆ. ಇದು ಲವ್‌ ಕಂ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾವಾಗಿದ್ದು, ದೊಡ್ಡ ತಾರಾಬಳಗ ಇರಲಿದೆಯಂತೆ.

ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್‌ ಸಂಗೀತ, ಸೆಂಥಿಲ್‌ ಕುಮಾರ್‌ ಛಾಯಾಗ್ರಹಣ, ಪೀಟರ್‌ ಹೆನ್‌ ಸಾಹಸ ಇದೆ.

ಮಾರ್ಚ್‌ 4 ರಂದು ಚಿತ್ರದ ಅದ್ಧೂರಿ ಲಾಂಚ್‌ ಕಾರ್ಯಕ್ರಮ ನಡೆಯಲಿದ್ದು, ರಾಜ್‌ಮೌಳಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next