Advertisement

7ನೇ ದಿನಕ್ಕೆ ಕಾಲಿಟ್ಟ ಮರಳು ಪ್ರತಿಭಟನೆ; ಇಂದು ವಿಶೇಷ ಸಭೆ

10:29 AM Oct 31, 2018 | Harsha Rao |

ಉಡುಪಿ: ಶಾಸಕ ರಘುಪತಿ ಭಟ್‌ ನೇತೃತ್ವದಲ್ಲಿ ನಡೆಯುತ್ತಿರುವ ಮರಳು ಮುಷ್ಕರ 7ನೇ ದಿನಕ್ಕೆ ಕಾಲಿಟ್ಟಿದೆ. ಎಲ್ಲ 170 ಗುತ್ತಿಗೆದಾರರಿಗೂ ಮರಳು ತೆಗೆಯಲು ಅನುಮತಿ ನೀಡಬೇಕು. ಇಲ್ಲವಾದಲ್ಲಿ ಧರಣಿ ಕೈ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

Advertisement

ಮಂಗಳವಾರ “ಉದಯವಾಣಿ’ಯೊಂದಿಗೆ ಮಾತನಾಡಿದ ಶಾಸಕ ರಘುಪತಿ ಭಟ್‌, ಸೋಮವಾರ ಜಿಲ್ಲಾಧಿಕಾರಿಗಳು 7 ಮಂದಿ ಸದಸ್ಯರ ಸಮಿತಿಯನ್ನು ಪುನಾರಚನೆ ಮಾಡಿದ್ದು, ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 2011ರಲ್ಲಿ ಪರವಾ
ನಿಗೆ ಪಡೆದವರಿಗೆ ಮಾತ್ರ ಮರಳು ತೆಗೆಯಲು ಅನುಮತಿ ನೀಡಲಾಗುತ್ತದೆ ಎಂದಿದ್ದಾರೆ. 2011ರಲ್ಲಿ ಪರವಾನಿಗೆ ಇದ್ದ ಸಾಕಷ್ಟು ಮಂದಿ ತಮ್ಮ ಪರವಾನಿಗೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದು ಹಸಿರು ಪೀಠದಲ್ಲಿ ಮತ್ತೆ ಕಾನೂನಾತ್ಮಕ ಸಮಸ್ಯೆಗೆ ಕಾರಣವಾಗಲಿದೆ. ಏಕೆಂದರೆ ಪರವಾನಿಗೆ ನೀಡಲು 2016ರಲ್ಲಿ ಎನ್‌ಜಿಟಿಗೆ ಸಲ್ಲಿಸಿದ ವರದಿಯಲ್ಲಿ ಬಹಳಷ್ಟು ಗುತ್ತಿಗೆದಾರರ ಹೆಸರು ಇಲ್ಲ. ಇದು ಮುಂದೆ ಕಾನೂನಾತ್ಮಕವಾಗಿ ತೊಂದರೆಯಾಗುತ್ತದೆ.

ಡಿಸಿಯವರು ಮರಳು ಸಮಸ್ಯೆಯನ್ನು ಇನ್ನಷ್ಟು ಜಟಿಲ ಗೊಳಿಸುತ್ತಿದ್ದಾರೆ. ಈ ಕುರಿತು ಅ. 31ರ ಬೆಳಗ್ಗೆ 10ಕ್ಕೆ ಸಭೆಯನ್ನು ಕರೆಯಲಾಗಿದ್ದು, ಇದರಲ್ಲಿ ಈ ಕುರಿತು ಚರ್ಚೆ ನಡೆಸುತ್ತೇವೆ ಎಂದರು. 

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷ ನಳಿನಿ ಪ್ರದೀಪ್‌ ರಾವ್‌, ಬಿಜೆಪಿ ಜಿÇÉಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಧರಣಿಯಲ್ಲಿ ಭಾಗವಹಿಸಿದರು. ಕಾಂಗ್ರೆಸ್‌ ಮುಖಂಡ, ಜಿ.ಪಂ. ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಆಗಮಿಸಿ ಧರಣಿಗೆ ಬೆಂಬಲ ವ್ಯಕ್ತಪಡಿಸಿ, ಜಿÇÉಾಡಳಿತ ತತ್‌ಕ್ಷಣ ಮರಳಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಮರಳಿಗಾಗಿ ಹೋರಾಟ ಸಮಿತಿಯಿಂದ ಬುಧವಾರ ಬೆಳಗ್ಗೆ 10 ಗಂಟೆಗೆ ಜಿÇÉಾಧಿಕಾರಿಗಳ ಕಚೇರಿ ನಡೆಯುವ ವಿಶೇಷ ಸಭೆಯಲ್ಲಿ ಕಾಲೇಜು ವಿದ್ಯಾರ್ಥಿ ಸಂಘಟನೆ, ರಿಕ್ಷಾ ಚಾಲಕ ಮಾಲಕ ಸಂಘಟನೆ, ಜಿÇÉಾ ಟ್ಯಾಕ್ಸಿಮನ್‌ ಅಸೋಶಿಯೇಷನ್‌, ಜಿÇÉಾ ವೈನ್‌ ಮರ್ಚೆಂಟ್ಸ್‌ ಅಸೋಶಿಯೇಶನ್‌, ಜಿÇÉಾ ಆಯುಷ್‌ ಆಯುರ್ವೇದಿಕ್‌ ಡಾಕ್ಟರ್ಸ್‌ ಆಸೋಶಿಯೇಶನ್‌ ಮತ್ತು ವಿವಿಧ ಸಂಘಟನೆಗಳ ನಾಯಕರು ಪಾಲ್ಗೊಳ್ಳುವರು ಎಂದು ಸರ್ವ ಸಂಘಟನೆ ಮರಳಿಗಾಗಿ ಹೋರಾಟ ಸಮಿತಿ ಸಂಚಾಲಕ ಎಂ.ಜಿ. ನಾಗೇಂದ್ರ ತಿಳಿಸಿದ್ದಾರೆ. 

Advertisement

ಸಿಎಂ ಭರವಸೆ
ಮಂಗಳವಾರ ತ್ರಾಸಿಯಲ್ಲಿ ಮುಖ್ಯಮಂತ್ರಿ ಯವರಿಗೆ ಮರಳು ಹೋರಾಟ ಸಮಿತಿಯ ಉಪಾಧ್ಯಕ್ಷ ಸತ್ಯಜಿತ್‌ ಬಿರ್ತಿ   ಮನವಿ ಸಲ್ಲಿಸಿದರು. ನ. 6ರೊಳಗೆ ಸಮಸ್ಯೆಯನ್ನು ಸರಕಾರ ಬಗೆಹರಿಸಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು ಎಂದು ಬಿರ್ತಿ ತಿಳಿಸಿದ್ದಾರೆ. 

ಗಣಿ ಅಧಿಕಾರಿ ವರ್ಗ
ಏತನ್ಮಧ್ಯೆ ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆಯ ಹಿರಿಯ ಭೂವಿಜ್ಞಾನಿ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿದ್ದ ಎ.ಎಂ. ನಿರಂಜನ ಅವರನ್ನು ಗಣಿ ಮತ್ತು ಭೂಗರ್ಭ ಶಾಸ್ತ್ರ ಇಲಾಖೆಯ ಸ್ಕ್ವಾಡ್‌ಗೆ ಬಿಟ್ಟುಕೊಡಲಾಗಿದೆ. ಈ ಸ್ಥಾನಕ್ಕೆ ಹಾಸನದಿಂದ ಪದ್ಮಜಾ ಅವರನ್ನು ವರ್ಗಾಯಿಸಲಾಗಿದೆ. ಇದು ಆಡಳಿತಾತ್ಮಕ ನಿರ್ಧಾರ. ಜಿಲ್ಲೆಗೆ ಪೂರ್ಣಕಾಲಿಕ ಹಿರಿಯ ಭೂವಿಜ್ಞಾನಿ ಅಗತ್ಯವಿದೆ ಎಂಬ ಕಾರಣಕ್ಕೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಾನ್‌ ಸಿಆರ್‌ಝಡ್‌ ವ್ಯಾಪ್ತಿಯ 13 ಮರಳು ದಿಬ್ಬಗಳನ್ನು ತೆರವುಗೊಳಿಸಲು 7 ಮಂದಿಯ ಮರಳು ಸಮಿತಿ ಮಂಜೂರಾತಿ ನೀಡಿದೆ. ಇನ್ನು ಮರಳು ದಿಬ್ಬಗಳನ್ನು ಹರಾಜು ಹಾಕುವ ಪ್ರಕ್ರಿಯೆ ನಡೆಯಬೇಕಾಗಿದೆ. ಸಿಆರ್‌ಝಡ್‌ ಪ್ರದೇಶದಲ್ಲಿ ಗುರುತಿಸಲಾದ 5 ಮರಳಿನ ದಿಬ್ಬಗಳಲ್ಲಿ ಮರಳನ್ನು ತೆಗೆಯುವುದಕ್ಕೆ ಗುತ್ತಿಗೆದಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಕಳೆದ ವರ್ಷ ಅರ್ಜಿ ಸಲ್ಲಿಸಿದ ಎಲ್ಲ 170 ಗುತ್ತಿಗೆದಾರರಿಗೆ ಪರವಾನಿಗೆ ನೀಡುವಷ್ಟು ದಿಬ್ಬಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಅವರ ಸೂಚನೆಯಂತೆ 2011ಕ್ಕೆ ಮೊದಲು ಮರಳು ತೆಗೆಯುತ್ತಿದ್ದ ಗುತ್ತಿಗೆದಾರರಿಗೆ ಪರವಾನಿಗೆ ನೀಡುವುದಾಗಿ ಜಿÇÉಾಧಿಕಾರಿ ಘೋಷಿಸಿ¨ªಾರೆ.

ಈಗ 2011ಕ್ಕೆ ಪೂರ್ವದಲ್ಲಿ ಮರಳು ತೆಗೆಯುತ್ತಿದ್ದ 69 ಮಂದಿ ಗುತ್ತಿಗೆದಾರರ ಪಟ್ಟಿ ಜಿÇÉಾಧಿಕಾರಿ ಅವರ ಬಳಿ ಸಿದ್ಧವಿದ್ದು, ಈ ಪಟ್ಟಿ ಹೊರತು ಪಡಿಸಿ 2011ಕ್ಕೆ ಮೊದಲು ಮರಳು ತೆಗೆಯುತ್ತಿದ್ದ ಗುತ್ತಿಗೆದಾರರಿಂದ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಂದು (ಬುಧವಾರ) ಕೊನೆಯ ದಿನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next