Advertisement

ಬಸ್ರೂರು -ಬಳ್ಕೂರಿನಲ್ಲಿ ದಡದಲ್ಲಿ ಮರಳು ದೋಣಿಗಳು!

12:04 AM May 30, 2019 | sudhir |

ಬಸ್ರೂರು: ಮರಳುಗಾರಿಕೆಗೆ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಮರಳುಗಾರಿಕೆ ದೋಣಿಗಳು ಇನ್ನೂ ನಿಂತೇ ಇದೆ. ಮರಳುಗಾರಿಕೆ ನಿಂತ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಕೂಲಿಕಾರ್ಮಿಕರು, ಗಾರೆ ಕೆಲಸದವರು ದಿಕ್ಕೇ ತೋಚದಂತಿದ್ದು, ಹಲವಾರು ಕಡೆಗಳಲ್ಲಿ ನಿರ್ಮಾಣ ಕಾಮಗಾರಿಗೆ ಕಾರ್ಮೋಡ ಕವಿದಿದೆ. ಇನ್ನು ಮಳೆಗಾಲವೂ ಆರಂಭವಾಗಲಿರುವುದರಿಂದ ಕೆಲಸ ಮಾಡುವುದೂ ಕಷ್ಟ ಎಂಬಂತಿದೆ.

Advertisement

ನಗರ ಸೇರಿದಂತೆ ಬಳ್ಕೂರು, ಕಂಡ್ಲೂರು, ಜಪ್ತಿ, ಹಳನಾಡು, ಆನಗಳ್ಳಿ ಮುಂತಾದೆಡೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕಾ ಪ್ರದೇಶಕ್ಕೆ ವರ್ಷದ ಹಿಂದೆ ಜಿಲ್ಲಾಧಿಕಾರಿ ದಾಳಿ ಮಾಡಿದ್ದು, ಅನಂತರ ಅಕ್ರಮ ಮರಳುಗಾರಿಕೆ ನಿಂತಿತ್ತು. ಉತ್ತರ ಪ್ರದೇಶದ ಮರಳು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಮರಳುಗಾರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಆದರೆ ಇದೀಗ ನೂತನ ಮರಳು ನೀತಿ ಜಾರಿಯಾಗದ ಹಿನ್ನೆಲೆಯಲ್ಲಿ ಮರಳು ತೆಗೆಯುವ ದೋಣಿಗಳು ದಡ ಸೇರಿ ನಿಂತಿದೆ.

ಮರಳುಗಾರಿಕೆಗೆ ಯಾರಿಗೂ ಅನುಮತಿ ನೀಡದೆ ಇರುವುದರಿಂದಾಗಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಇನ್ನಾದರೂ ಮರಳುಗಾರಿಕೆಗೆ ಜಿಲ್ಲಾಡಳಿತ ಅನುಮತಿ ನೀಡಿದರೆ, ಕಾರ್ಮಿಕರ ಜೀವನ ಸುಗಮವಾಗಬಹುದು ಎಂಬ ನಿರೀಕ್ಷೆ ಇದೆ. ಜತೆಗೆ ಈ ಭಾಗದ ಆರ್ಥಿಕ ವ್ಯವಹಾರಕ್ಕೂ ಉತ್ತೇಜನ ಸಿಗಬಹುದು ಎಂದು ಜನರು ಹೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next